ಮನೆ ರಾಜ್ಯ ವಿಧಾನಸಭೆಯಲ್ಲಿ ನಮಾಜ್​​ ಗೆ ಅವಕಾಶ ನೀಡಬಾರದು: ಪ್ರಮೋದ್ ಮುತಾಲಿಕ್

ವಿಧಾನಸಭೆಯಲ್ಲಿ ನಮಾಜ್​​ ಗೆ ಅವಕಾಶ ನೀಡಬಾರದು: ಪ್ರಮೋದ್ ಮುತಾಲಿಕ್

0

ಹುಬ್ಬಳ್ಳಿ:  ವಿಧಾನಸಭೆಯಲ್ಲಿ ನಮಾಜ್​​ ಗೆ ಅವಕಾಶ ನೀಡುವ  ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದು, ನಮಾಜ್ ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದಾರೆ.

Join Our Whatsapp Group

ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ  ಅವರು, ವಿಧಾನಸೌಧ ಏನು ಮೆಕ್ಕಾ ಮದೀನಾ  ಅಂತಾ ತಿಳಿದುಕೊಂಡಿದ್ದೀರಾ ? ಇದು ಡೆಂಜರಸ್ ಮಾನಸಿಕತೆ.  ವಿಧಾನಸೌಧ ಪವಿತ್ರ ದೇಗುಲ. ಅಲ್ಲಿ ನಮಾಜ್ ಮಾಡ್ತೀರಾ ನೀವು. ಕಡತದಿಂದ ವಾಪಸ್ ಆ ಮಾತು ತೆಗಿಯಗಿಬೇಕು. ಅವರಿಗೆ ಶಿಕ್ಷೆಯಾಗಬೇಕು. ಇದೇ ಕೋಮುವಾದ ಎಂದು ಕಿಡಿಕಾರಿದರು.

ಹಿಜಾಬ್ ಬಗ್ಗೆ ಚರ್ಚೆ ನಡೆದಾಗ ಗೌರವ ಕೊಡದೇ ಈಗ ನಮಾಜ್ ಮಾಡಲು ಜಾಗ ಕೇಳುತ್ತಿದ್ದಾರೆ. ಈಗ ನಮಾಜ್ ಮುಂದೆ ಮಸೀದಿ ದರ್ಗಾ ಅಂತಾರೆ. ಪವಿತ್ರ ಜಾಗದಲ್ಲಿ ನಮಾಜ್ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.