ಮನೆ ಅಪರಾಧ ನಂಜನಗೂಡು: ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ, ಆಭರಣ ಕದ್ದೊಯ್ದ ಕಳ್ಳರು

ನಂಜನಗೂಡು: ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ, ಆಭರಣ ಕದ್ದೊಯ್ದ ಕಳ್ಳರು

0

ನಂಜನಗೂಡು(Nanjangud):  ಮನೆ ಮಾಲೀಕರು ಸಂಬಂಧಿಕರ ಮನೆಗೆ ತೆರಳಿದ್ದ ಸಮಯದಲ್ಲಿ ಕಳ್ಳರು ಮನೆ ಮಹಡಿಯ ಬಾಗಿಲನ್ನು ಬ್ಲಾಕ್ ಮಾಡಿ ಕೆಳಗಿನ ಮನೆಯ ಬೀಗವನ್ನು ಮೀಟಿ ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 250 ಗ್ರಾಂ ಚಿನ್ನಾಭರಣ, 1.30 ಕೆಜಿ ಬೆಳ್ಳಿ ಪದಾರ್ಥ ಮತ್ತು 80000 ನಗದು ರೂಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಗರದ ದೇವಿರಮ್ಮನಹಳ್ಳಿ ರಸ್ತೆಯ ಸಾಯಿಬಾಬಾ ದೇವಾಲಯ ಪಕ್ಕದ ಬೀದಿಯ ಮನೆಯಲ್ಲಿ ನಡೆದಿದೆ.

ರಂಗರಾಜು ಭುವನೇಶ್ವರಿ ಈ ದುರ್ಘಟನೆ ನಡೆದಿದೆ. ಇದಲ್ಲದೆ ಸಮೀಪದ ಬಿಸಿಎಂ ಹಾಸ್ಟೆಲ್ ನ ಬೀಗ ಮುರಿದ ಕಳ್ಳರು ಬೀರುವಿನಲ್ಲಿದ್ದ ಏಳು ಸಾವಿರ ನಗದು ಹಾಗೂ 4gram ಉಂಗುರವನ್ನು ಕದ್ದೊಯ್ದಿದ್ದಾರೆ.

ವಸತಿಗೃಹದ ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಕದ್ದೊಯ್ಯುವುದರ ಜೊತೆಗೆ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ.

ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚುಗಾರರು ಕರೆಸಲಾಗಿತ್ತು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚೇತನ್, ಡಿವೈಎಸ್ಪಿ ಗೋವಿಂದರಾಜು, ಗ್ರಾಮಾಂತರ ಠಾಣೆಯ ಸಿಪಿಐ ಶಿವನಂಜಶಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಿಂದಿನ ಲೇಖನಪ್ರಧಾನಿ ಮೋದಿ ರಾಜ್ಯ ಪ್ರವಾಸ: ಕಾರ್ಯಕ್ರಮಗಳ ಸಂಭವನೀಯ ಪಟ್ಟಿ ಬಿಡುಗಡೆ
ಮುಂದಿನ ಲೇಖನಕಾಮನ್​ವೆಲ್ತ್ ಗೇಮ್ಸ್​ಗೆ ಮಹಿಳಾ ಟೇಬಲ್ ಟೆನಿಸ್​ ಆಟಗಾರರ ಹೆಸರು ಕಳಿಸದಂತೆ ಟಿಟಿಎಫ್​ಗೆ ಹೈಕೋರ್ಟ್ ಆದೇಶ