ಪದ್ಮ ಮಹಾಕಲ್ಪವು ಅತಿಥಿವಾಗುತ್ತಲೇ ವಾಸುದೇವನಲ್ಲಿನ ಸೃಜನ ಶಕ್ತಿಯು ಎಚ್ಚೆತ್ತುಕೊಂಡು ಸರ್ವಶೂನ್ಯವಾಗಿರುವ ಸೃಷ್ಟಿಯನ್ನು ಪರಿವೀಕ್ಷಿಸಿತು. ಆ ಸಮಯದಲ್ಲಿ ಜಲಧೀಶಾಹಿಯಾದ ಜನಾರ್ಧನನ್ನು ತನ್ನ ಸೃಜನಶೀಲತೆಗೆ ಬ್ರಹ್ಮಪದವಿಯನ್ನು ಪ್ರಸಾದಿಸಿದನು.
“ಮೈತ್ರೇಯ ! ನಾರಾ ಅಂದರೆ ನೀರು ಎಂದರ್ಥ. ಆಯಾನವೆಂದರೆ ಸಂಚಾರ. ಸೃಷ್ಟಿಯು ಆದಿಯ ಸಮಯದಲ್ಲಿ ನಾರಗಳನ್ನು ಆಯನವಾಗಿ ಉಳ್ಳವನಾದ್ದರಿಂದ ವಾಸುದೇವನಿಗೆ ನಾರಾಯಣನೆಂದು ಕರೆಯುವರು.
ನಾರಾ ಎಂದರೆ ಜ್ಞಾನ ಎಂಬ ಮತ್ತೊಂದು ಅರ್ಥವು ಸಹ ಇದೆ. ಆದ್ದರಿಂದ ನಾರಾಯಣನೆಂದರೆ ಜ್ಞಾನಮಾರ್ಗದಿಂದ ಅಭಿಗಮ್ಯನೆಂದು ತಿಳಿಯಬೇಕು. ಆದಿದೇವನಾದ ಶ್ರೀಮನ್ನಾರಾಯಣ ಪ್ರಜಾಪ್ರತಿಯ ರೂಪವನ್ನು ಧರಿಸಿ ನೂರು ವರ್ಷಗಳ ಪ್ರಮಾಣವನ್ನು ಹೊಂದಿ ಅಲ್ಲಿಯವರೆಗೂ ಸೃಷ್ಟಿಯ ಕಾರ್ಯವನ್ನು ನಿರ್ವಹಿಸುವಂತೆ ಮಾಡುತ್ತಾನೆ. ಜಗದ್ವಿದಾತ ರೂಪದಲ್ಲಿ ನೂರು ವರ್ಷಗಳೆಂದರೆ ಅನೇಕಾನೇಕ ಮಹಾಯುಗಗಳು ಕಳೆದು ಕಳೆದು ಹೋಗುತ್ತದೆ.
ಆಕಾಶ, ಕಾಲ, ದಿಕ್ಕು, ಆತ್ಮ, ಮನಸ್ಸು ಎಂಬ ಈ ಐದು ನಿತ್ಯಗಳು ಇವುಗಳಲ್ಲಿ ಮೊದಲನೆಯದು ನಾಲ್ಕು ವಿಭೂ ದ್ರವ್ಯಗಳು ಪ್ರಭುಸ್ವರೂಪಗಳು ಆಗಿವೆ. ಕಾಲವು ನಿತ್ಯ ಪ್ರವಾಹದಂತಹದು. ಅನಾದಿ ಮಧ್ಯ ನಿಧನವಾದ ಕಾಲವು ಅಖಂಡವಾಗಿದ್ದರೂ ನಡೆದಿರುವುದು, ನಡೆಯುತ್ತಿರುವುದು, ನಡೆಯುವಂತಹ ವ್ಯವಹಾರಗಳಿಗೆ ಕಾರಣ ಉಪಾದಿಭೇದವೇ ಹೊರತು ಈ ಬದಲಾವಣೆಗಳು ಶಾಶ್ವತವಾದ ಕಾಲಕ್ಕೆ ಅನ್ವಯಿಸುವ ಸಹಜಧರ್ಮಗಳಲ್ಲ.
ಕಾಲ ಸ್ವರೂಪನಾದ ಪರಮಾತ್ಮನ ತತ್ವವನ್ನು ಜೀರ್ಣಿಸಿಕೊಳ್ಳುವುದಕ್ಕೆ ಅನುಕೂಲವಾಗಿ ನಿಮಿಷಾಧಿ ಮಹಾಕಲ್ಪ ಪರ್ಯಾಂತವಾದ ಕಾಲ ಸ್ವರೂಪವನ್ನು ತಿಳಿಯಬೇಕು” ಎಂದು ಪರಾಶರ ಮುನಿಗಳು ಮೈತ್ರೇಯನಿಗೆ ಈ ರೀತಿಯಾಗಿ ವಿವರಿಸಿದ್ದರು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.