ಮನೆ ರಾಜ್ಯ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಸರ್ಕಾರದ ಕೈವಾಡ ಇರಬಾರದು:  ಶಾಸಕ ತನ್ವೀರ್ ಸೇಠ್ ಖಂಡನೆ‌

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಸರ್ಕಾರದ ಕೈವಾಡ ಇರಬಾರದು:  ಶಾಸಕ ತನ್ವೀರ್ ಸೇಠ್ ಖಂಡನೆ‌

0

ಮೈಸೂರು(Mysuru): ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಸರ್ಕಾರದ ಕೈವಾಡ ಇರಬಾರದು ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ರಾಜ್ಯ ಸರ್ಕಾರದ ಕಾರ್ಯ ವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ರಾಜ್ಯ ಸರ್ಕಾರ ಕೈವಾಡ ಇರಬಾರದು. ನಾನು ಶಿಕ್ಷಣ ಸಚಿವನಾಗಿದ್ದಾಗ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ರಚಿಸಲಾಗಿತ್ತು. ಆಗ ರಚಿಸಿದ್ದ 27 ಸಮಿತಿಗಳಲ್ಲಿ 170ಕ್ಕೂ ಹೆಚ್ಚು ಸದಸ್ಯರು ಇದ್ದರು‌. ಆಗ 1 ರಿಂದ 10ನೇ ತರಗತಿ ವರೆಗಿನ ಪಠ್ಯವನ್ನು ಪರಿಷ್ಕರಣೆ ಮಾಡಲಾಯಿತು. ಈಗ 11 ಜ‌ನ ಸದಸ್ಯ ಸಮಿತಿಯಲ್ಲಿ ಗೊಂದಲ ಆಗುತ್ತಿದೆ. ಆದರೆ ಸಮಿತಿಯಲ್ಲಿದ್ದ ಸದಸ್ಯರು ಕುವೆಂಪು, ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗುವಂತಹ ವಿಷಯಗಳನ್ನು ಸೇರಿಸಿದ್ದು ಸರಿಯಲ್ಲ‌. ಸಮಿತಿಯಲ್ಲಿ ಇದ್ದವರೆ ಈ ರೀತಿ ಪ್ರವೃತ್ತಿ ತೋರಿದರೆ ಮಕ್ಕಳ ಸ್ಥಿತಿ ಏನಾಗಬೇಡ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಕುರಿತು ಪ್ರತಿಕ್ರಿಯಿಸಿ, ಸ್ವಾತಂತ್ರದ ಸಲುವಾಗಿ ಪ್ರಾಣ ತ್ಯಾಗ ಮಾಡಿದ್ದು ಯಾರು..? ಬ್ರಿಟಿಷ್‌ ಗುಲಾಮರಾಗಿ ಇದ್ದದ್ದು ಯಾರು.? ಈ ಇತಿಹಾಸ ತಿರುಚಲು ಸಾಧ್ಯವಿಲ್ಲ. ಟಿಪ್ಪು ಅರಮನೆ ಮುಂಭಾಗದಲ್ಲೆ ರಂಗನಾಥಸ್ವಾಮಿ ದೇವಾಲಯ ಗಟ್ಟಿಯಾಗಿ ನಿಂತಿದೆ.ಅದರ ಜೀರ್ಣೋದ್ಧಾರಕ್ಕೆ ಟಿಪ್ಪು ನೀಡಿದ ನೆರವು, ಇದೆಲ್ಲವೂ ಇತಿಹಾಸದಲ್ಲಿ ಇದೆ. ಯಾವುದೋ ನೆಪ ಇಟ್ಟುಕೊಂಡು ಗೊಂದಲ ಸೃಷ್ಟಿ ಮಾಡುವುದು ಸರಿ ಅಲ್ಲ. ಜಾಮೀಯಾ ಮಸೀದಿ ಸಂರಕ್ಷಣೆ ಮಾಡುವಂತ ಜವಾಬ್ಧಾರಿ ವಕ್ಫ್ ಮಂಡಳಿಗೆ ಕೊಟ್ಡಿದೆ. ಇದರ ಮಾಲಿಕತ್ವ ನಮಗೆ ಕೊಟ್ಟಿಲ್ಲ. ಆರ್ಕಾಲಜಿ ಸರ್ವೆ ಆಫ್ ಇಂಡಿಯಾ ಇದರ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.