ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಮೈಸೂರು(Mysuru): ಯಾರು ಏನೇ ಅಂದರೂ ನನ್ನ ನಿಲುವು ಬದಲಾಗುವುದಿಲ್ಲ. ಗುಂಬಜ್ ಮಾದರಿಯ ಗೋಪುರಗಳನ್ನು ತೆರವುಗೊಳಿಸಬೇಕು ಎಂಬ ತಮ್ಮ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.
ಇಂದು ಜಲದರ್ಶಿನಿ ಆವರಣದಲ್ಲಿರುವ ಸಂಸದರ ಕಚೇರಿಯ ಮುಂಬಾಗದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ಜಿಲ್ಲಾಧಿಕಾರಿಗಳು ಸಮಯ ಕೇಳಿದ್ದಾರೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ನಿಲ್ದಾಣ ತೆರವು ಮಾಡುವಂತೆ ನೋಟಿಸ್ ನೀಡಿದ್ದಾರೆ. ಸ್ವಲ್ಪ ಕಾಲಾವಕಾಶ ನೀಡುತ್ತೇನೆ. ಆದರೆ ನನ್ನ ನಿಲುವಿನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.
ಸದ್ಯ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದಿಂದ ನೋಟಿಸ್ ನೀಡಿದ್ದಾರೆ. ಕೆ.ಐ.ಆರ್.ಡಿ.ಎಲ್ ಮಾದರಿಯಲ್ಲೇ ಕಟ್ಟಡ ನಿರ್ಮಾಣ ಮಾಡಿದರೆ ತಪ್ಪಲ್ಲ. ಆದರೆ ನಕ್ಷೆಯಲ್ಲಿ ಗೋಪುರಗಳಿಲ್ಲ. ಈಗ ನಿರ್ಮಾಣವಾಗಿರುವ ಗೋಪುರಗಳನ್ನು ತೆರವುಗೊಳಿಸಬೇಕು. ಇದಕ್ಕೆ ಕಾಲವಾಕಾಶ ಕೊಟ್ಟಿದ್ದೇನೆ, ಅವರ ಗಡುವಿಗೆ ಕಾಯುತ್ತಿದ್ದೇನೆ. ಕಾಲಾವಕಾಶ ಮುಗಿದ ಮೇಲೆ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ಆದರೆ ಕೆ.ಐ.ಆರ್.ಡಿ.ಎಲ್ ನಿರ್ಣಯಕ್ಕೆ ನಾನು ಬದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇನ್ನು, ಸಾರ್ವಜನಿಕ ಹಣದಲ್ಲಿ ಕಟ್ಟಿರುವ ಕಟ್ಟಡದಲ್ಲಿ ಯಾವ ಶಾಸಕ, ಸಂಸದ ಒಂದು ರೂಪಾಯಿ ಹಾಕಿಲ್ಲ. ಅದು ಸಾರ್ವಜನಿಕರ ಹಣ. ಈ ಹಣದಲ್ಲಿ ನಿರ್ಮಾಣವಾಗಿರುವ ಮಾದರಿ ಪ್ರಾಧಿಕಾರದ ಅನುಮತಿ ಪಡೆಯದೆ ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಡವಾಗಿದ್ದು, ಇದರಲ್ಲಿ ಯಾರ ಭಾವಚಿತ್ರವನ್ನು ಹಾಕದಂತೆ ಕೋರ್ಟ್ ಆದೇಶ ನೀಡಿದೆ. ಖಾಸಗಿ ಬಡಾವಣೆಯಲ್ಲಿ ಒಂದು ಗಿಡವನ್ನು ನೆಡಬೇಕಾದರೆ ಅನುಮತಿ ಬೇಕು. ಆದರೆ, ರಾಷ್ಟ್ರೀಯ ಪ್ರಾಧಿಕಾರದ ಅನುಮತಿ ಪಡೆಯದೇ ಹೇಗೆ ಬಸ್ ನಿಲ್ದಾಣ ನಿರ್ಮಾಣವಾಯಿತು ಎಂದು ಪ್ರಶ್ನಿಸಿದರು.
ಕಿರುಕುಳ ನೀಡುವಷ್ಟು ದೊಡ್ಡವನಲ್ಲ: ಶಾಸಕ ಎಸ್ ಎ ರಾಮದಾಸ್ಗೆ ಕಿರುಕುಳ ನೀಡುವಷ್ಟು ದೊಡ್ಡ ಮನುಷ್ಯ ನಾನಲ್ಲ. ಕಿರುಕುಳ ಆಗುವುದು ಟಿಪ್ಪು ಅನುಯಾಯಿಗಳಿಗೆ, ಶಿವಾಜಿ ಮಹಾರಾಜರ ಅನುಯಾಯಿಗಳಿಗೆ ಅಲ್ಲ. ರಾಮದಾಸ್ 29 ವರ್ಷದ ಹಿಂದೆಯೇ ಶಾಸಕರಾದವರು. ಮೋದಿಯಿಂದ ಮೆಚ್ಚುಗೆ ಪಡೆದವರು, ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡವನಲ್ಲ ಎಂದು ಹೇಳಿದರು.
ರಾಮದಾಸ್ ಇನ್ನೂ 10 ಅಥವಾ 15 ಬಸ್ ನಿಲ್ದಾಣ ಕಟ್ಟಲಿ ನನ್ನದೇನು ಅಭ್ಯಂತರವಿಲ್ಲ. ಆದರೆ ಎಲ್ಲಾ ಅಭಿವೃದ್ಧಿಗಳು ಮಹಾರಾಜರ ಪರಂಪರೆಯ ರೀತಿ ಇರಬೇಕು. ಗುಂಬಜ್ಗು ಇಂಡೋ ಸಾರ್ಸೆನಿಕ್ ಕಲೆಗೂ ತುಂಬಾ ವ್ಯತ್ಯಾಸವಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.