ದಾವಣಗೆರೆ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ವಿರೋಧಿಸಿ ದಾವಣಗೆರೆಯಲ್ಲಿ ನೂರಾರು ಭಕ್ತರು ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದಾರೆ.
`ದಾವಣಗೆರೆ ಜನರ ನಡಿಗೆ ಧರ್ಮಸ್ಥಳದ ಕಡೆಗೆ’ ಎಂಬ ಘೋಷದೊಂದಿಗೆ ಭಕ್ತರು ಯಾತ್ರೆ ಹೊರಟಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ 50 ಕಾರು, 2 ಬಸ್ನಲ್ಲಿ ಭಕ್ತರು ಹೊರಟಿದ್ದಾರೆ. ಉಜಿರೆಯಲ್ಲಿ ಎಲ್ಲರೂ ಸೇರಿ, ಅಲ್ಲಿಂದ ಮೆರವಣಿಗೆ ನಡೆಸಲಿದ್ದಾರೆ. ಬಳಿಕ ವಿರೇಂದ್ರ ಹೆಗ್ಗಡೆಯವರನ್ನು ಭಕ್ತರು ಭೇಟಿ ಮಾಡಲಿದ್ದಾರೆ.
ನಂತರ ನಿಮ್ಮ ಜೊತೆ ನಾವಿದ್ದೇವೆ ಎಂದು ಹೆಗ್ಗಡೆಯವರಿಗೆ ಭಕ್ತರು ವಾಗ್ದಾನ ನೀಡಲಿದ್ದಾರೆ. ನಗರದ ಜಯದೇವ ವೃತ್ತದಿಂದ ಯಾತ್ರೆಗೆ ಚಾಲನೆ ಸಿಕ್ಕಿದೆ ಎಂದು ಹೇಳಲಾಗಿದೆ.















