ಮನೆ ರಾಜ್ಯ ಪೊಲೀಸ್ ಠಾಣೆಯಲ್ಲಿ ಕೋಳಿ ಬಲಿ: ಎಸ್ ಐ ಸೇರಿದಂತೆ  ನಾಲ್ವರಿಗೆ ನೋಟಿಸ್

ಪೊಲೀಸ್ ಠಾಣೆಯಲ್ಲಿ ಕೋಳಿ ಬಲಿ: ಎಸ್ ಐ ಸೇರಿದಂತೆ  ನಾಲ್ವರಿಗೆ ನೋಟಿಸ್

0

ಹಾಸನ(Hassan): ಸರಣಿ ಅಪಘಾತ, ಅನಾಹುತ ತಡೆಯಲು ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಕೋಳಿ ಬಲಿ ನೀಡಿದ್ದು, ಸಬ್‌ ಇನ್ಸ್‌ಪೆಕ್ಟರ್‌ ಸೇರಿ ನಾಲ್ವರು ಸಿಬ್ಬಂದಿ ನೋಟಿಸ್ ಜಾರಿ ಮಾಡಲಾಗಿದೆ.

ಇತ್ತೀಚಿನ ದಿನದಲ್ಲಿಸರಣಿ ಅಪಘಾತ, ನೀರಿಗೆ ಬಿದ್ದು ವ್ಯಕ್ತಿ ಸಾವು, ಕಳವು ಪ್ರಕರಣ ಹೀಗೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣ ಹೆಚ್ಚಿದ ಕಾರಣಕ್ಕಾಗಿ ಹೀಗೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಹಿರಿಯ ಅಧಿಕಾರಿಗಳಿಗೆ ಉತ್ತರಿಸುವುದು ಹೇಗೆ ಎಂದು ಚಿಂತಿಸಿದ ಕೆಲ ಪೊಲೀಸರು ಠಾಣೆಯಲ್ಲಿ ಕೋಳಿ ಬಲಿ ಕೊಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಇದು ಸರಕಾರಿ ಕಚೇರಿಯಲ್ಲಿ ಪ್ರಾಣಿ ಬಲಿ ನಿಷೇಧ ಕಾಯಿದೆ ಉಲ್ಲಂಘಿಸಿದಂತಾಗಿದ್ದು, ಇದನ್ನು ಪ್ರಶ್ನಿಸಿ ನೂತನ ಎಸ್‌ಪಿ ಹರಿರಾಮ್‌ ಶಂಕರ್‌ ನೋಟಿಸ್‌ ನೀಡಿ ಸ್ಪಷ್ಟನೆ ಕೇಳಿದ್ದು, ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ನೋಟಿಸ್‌ನಲ್ಲಿ ಕೇಳಿದ್ದಾರೆ.

ಹಿಂದಿನ ಲೇಖನಮತವೇ ಇಲ್ಲದವರು ಬಹುಮತ ಗಳಿಸಲು ಹೇಗೆ ಸಾಧ್ಯ ?: ಬಿಜೆಪಿ
ಮುಂದಿನ ಲೇಖನಮೈಸೂರು ವಿಶ್ವವಿದ್ಯಾಲಯ: ಆನ್‌ಲೈನ್‌, ಆಫ್‌ಲೈನ್ ಕೋರ್ಸ್‌ಗಳ ಶುಲ್ಕ ಹೆಚ್ಚಳಕ್ಕೆ ತೀರ್ಮಾನ