ಮನೆ ರಾಜಕೀಯ ಪ್ರೊ.ನಂಜುಂಡಸ್ವಾಮಿ ಅವರ ವಿಚಾರಧಾರೆ ಇಂದಿನ ಸಮಾಜಕ್ಕೆ ಅಗತ್ಯ: ಸಿದ್ದರಾಮಯ್ಯ

ಪ್ರೊ.ನಂಜುಂಡಸ್ವಾಮಿ ಅವರ ವಿಚಾರಧಾರೆ ಇಂದಿನ ಸಮಾಜಕ್ಕೆ ಅಗತ್ಯ: ಸಿದ್ದರಾಮಯ್ಯ

0

ಬೆಂಗಳೂರು(Bengaluru): ಪ್ರೊ. ನಂಜುಂಡಸ್ವಾಮಿ(Prof Nanjundaswamy) ಅವರ ವಿಚಾರಧಾರೆಗಳು ಹಾಗೂ ಚಿಂತನೆಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿದ್ದು, ಅವುಗಳೆಲ್ಲವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Sidddaramaiah) ತಿಳಿಸಿದರು.

ನಗರದ ತಮ್ಮ ಸರ್ಕಾರಿ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಚಿಂತನೆಯ ‘ಬಾರುಕೋಲು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ, ಕೃಷಿ, ಭ್ರಷ್ಟಾಚಾರ, ಅಧಿಕಾರಿಗಳ ನಡೆ ಬಗ್ಗೆ ನಂಜುಂಡಸ್ವಾಮಿ ಅವರು ತಮ್ಮದೇ ವಿಚಾರಧಾರೆಗಳನ್ನು ಹೊಂದಿದ್ದರು. ಅವರ ವಿಚಾರಧಾರೆ ಹಾಗೂ ಚಿಂತನೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದೂ ಹೇಳಿದರು.

‘ಕಾಲೇಜು ದಿನಗಳಲ್ಲಿ ನಮ್ಮಲ್ಲಿ ರಾಜಕೀಯ ಹಾಗೂ ಸಮಾಜವಾದಿ ಚಿಂತನೆಗಳನ್ನು ಪ್ರೊ. ನಂಜುಂಡಸ್ವಾಮಿ ಅವರು ಬಿತ್ತಿದ್ದರು. ಅಲ್ಲಿಯವರೆಗೂ ನನಗೆ ರಾಜಕೀಯ ಗಂಧ ಗಾಳಿಯೂ ಇರಲಿಲ್ಲ’. ‘ಅನ್ಯಾಯವಾದವರ ಪರ ನಿಂತು ಸರ್ಕಾರ ಹಾಗೂ ಅಧಿಕಾರಿಗಳಿಗೆ ಬಾರಕೋಲು ಬೀಸುತ್ತಿದ್ದ ಅವರ ಪ್ರೇರಣೆಯಿಂದಲೇ ನಾನು ರಾಜಕೀಯಕ್ಕೆ ಬಂದೆ’ ಎಂದು ವಿಧಾನಸಭೆ ಹೇಳಿದರು.

ನಂಜುಂಡಸ್ವಾಮಿ ಅವರ ಪುತ್ರಿ‌ ಚುಕ್ಕಿ, ವಕೀಲ ರವಿವರ್ಮಕುಮಾರ್, ಪುಸ್ತಕ‌ ಸಂಪಾದಕರಾದ ನಟರಾಜ್ ಹುಳಿಯಾರ್ ಹಾಗೂ ರವಿಕುಮಾರ ಬಾಗಿ ಹಾಜರಿದ್ದರು.

ಹಿಂದಿನ ಲೇಖನಜನರನ್ನು ಮೆಚ್ಚಿಸಲು ಅಧಿಕಾರ ಮಾಡಿ: ಸಿಎಂಗೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್
ಮುಂದಿನ ಲೇಖನಮಗಳಿಗೆ ಮಾಲತಿ ಮೇರಿ ಎಂದು ಹೆಸರಿಟ್ಟ ಪ್ರಿಯಾಂಕಾ ಚೋಪ್ರಾ, ನಿಕ್ ದಂಪತಿ