ಮನೆ Uncategorized ವಿಧಾನಸಭೆಯ ಕಲಾಪದಲ್ಲಿ ಮೈಸೂರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಪ್ರಸ್ತಾವನೆ: ಶಾಸಕ ಟಿ. ಎಸ್. ಶ್ರೀವತ್ಸ

ವಿಧಾನಸಭೆಯ ಕಲಾಪದಲ್ಲಿ ಮೈಸೂರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಪ್ರಸ್ತಾವನೆ: ಶಾಸಕ ಟಿ. ಎಸ್. ಶ್ರೀವತ್ಸ

0

ಬೆಂಗಳೂರು: ಸೋಮವಾರ ನಡೆದ ವಿಧಾನಸಭೆಯ ಕಲಾಪದ ವೇಳೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ. ಎಸ್. ಶ್ರೀವತ್ಸ ರವರ ಚರ್ಚೆಯ ಸಮಯದಲ್ಲಿ ಮೈಸೂರು ಮಹಾನಗರ ಹಾಗೂ ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ  ಬಜೆಟ್ ನಲ್ಲಿ ಘೋಷಣೆ ಆಗಿರುವ ಕೆಲವು ಯೋಜನೆಗಳು ಮತ್ತು ಕಳೆದ ಬೊಮ್ಮಾಯಿ ರವರ ನೇತೃತ್ವದಲ್ಲಿ ನಡೆದ ಬಜೆಟ್ ನ ಕೆಲವು ಘೋಷಣೆಗಳ ಪೂರಕವಾಗಿ ಸಮರ್ಪಕವಾಗಿ ಅನುದಾನವನ್ನು ವಿತರಿಸಲು ಹಾಗೂ ಶೀಘ್ರದಲ್ಲೇ ಕೆಲಸ ನಡೆಸುವ ಬಗ್ಗೆ ಸದನದಲ್ಲಿ ವಿಚಾರವನ್ನು ಮಂಡಿಸಿದರು.

Join Our Whatsapp Group

ನಂತರ ಮಾತನಾಡಿದ  ಶ್ರೀವತ್ಸರವರು ಮೈಸೂರು ಜಿಲ್ಲೆಯವರೇ ಹಾಗೂ ಹಿಂದುಳಿದ ವರ್ಗದ ಎರಡನೇ ನಾಯಕರಾದಂತಹ ಸಿದ್ದರಾಮಯ್ಯನವರು ತಮ್ಮ ಸ್ವಂತ ತವರು ಜಿಲ್ಲೆಗೆ ಕೊಟ್ಟಿರುವ  ಬಜೆಟಿನ ಘೋಷಣೆಯಲ್ಲಿ ಹೆಚ್ಚಿನ ಹಣಕಾಸನ್ನು ಮೀಸಲಿಡಬೇಕೆಂದು ಕೇಳಲಾಯಿತು, ದೊಡ್ಡ ಆಸ್ಪತ್ರೆ ಎಂದು ಹೆಸರುವಾಸಿ ಯಾಗಿರುವ ಕೃಷ್ಣರಾಜ ಆಸ್ಪತ್ರೆ ಮುಂದಿನ ವರ್ಷಕ್ಕೆ 100 ವರ್ಷಗಳು ತುಂಬುತಿದೆ, ಈ ಕಟ್ಟಡಕ್ಕೆ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ   ಅಭಿವೃದ್ಧಿಯನ್ನು ಮಾಡಲು ಸಹಕಾರಿಯಾಗಿ  ಕರ್ನಾಟಕ ರಾಜ್ಯದಲ್ಲೇ ಮಾದರಿ ಆಸ್ಪತ್ರೆಯಾಗಿ ಮಾಡಬೇಕು ಕೇಳಲಾಯಿತು.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತಿರತಕ್ಕಂತಹ ಚಿತ್ರ ರಸಿಕರ  ಚಿತ್ರನಗರಿ ಸ್ಥಾಪಿಸಲು ಅನುಮೋದನೆಯಾಗಿದ್ದು, ಈ ಕಾರ್ಯ ಚಟುವಟಿಕೆಗಳು ಹಾಗೂ ಇದಕ್ಕೂ ಕೂಡ ಹೆಚ್ಚಿನ ಅನುದಾನವನ್ನು ನೀಡಿ ಮೈಸೂರು ಜಿಲ್ಲೆಯನ್ನು ಇನ್ನು ಹೆಚ್ಚಿನ ಪ್ರವಾಸೋದ್ಯಮ ಮಾಡುವ ನಿಟ್ಟಿನಲ್ಲಿ  ಕೋರಿದ್ದೇನೆ.

ಮೈಸೂರು ಇತಿಹಾಸ ಪ್ರಸಿದ್ಧವಾಗಿದ್ದು,  ದೇಶ ವಿದೇಶಗಳ ಸಂಪರ್ಕವು  ವಿಮಾನದ ಮೂಲಕ ನಡೆಸುವ ನಿಟ್ಟಿನಿಂದ ಕೇಂದ್ರ ಸರ್ಕಾರ ಹಾಗೂ ಹಿಂದಿನ  ರಾಜ್ಯ ಸರ್ಕಾರ ಇದರ ರನ್ ವೇ ಗಾಗಿ 175 ಕೋಟಿ ಘೋಷಣೆ ಮಾಡಿತ್ತು,ಅದರೆ ಆ ವಿಷಯದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಸರ್ಕಾರದ ಯೋಜನೆ ನೆನಗುದಿಗೆ ಬಿಳಬಹುದಾ ಎಂಬ ಆತಂಕ.ಹಾಗಾಗಿ ಕೂಡಲೇ  ಸರ್ಕಾರ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೇಳಲಾಯಿತು .

ಮೈಸೂರು ಸಾಂಸ್ಕೃತಿಕ ನಗರಿ ಅದರಲ್ಲೂ ಹೆಚ್ಚು ಹೆರಿಟೇಜ್ ಸಿಟಿ ಯಲ್ಲಿ ಇತಿಹಾಸ ಬಿಲ್ಡಿಂಗ್ ಗಳಾದ ಲ್ಯಾನ್ಸಡೌನ್, ದೇವರಾಜ ಮಾರುಕಟ್ಟೆ, ವಾಣಿವಿಲಾಸ್ ಮಾರುಕಟ್ಟೆ,ಎಂ.ಜಿ.ರಸ್ತೆ ಯ ಮಾರುಕಟ್ಟೆ ಯ ಬಗ್ಗೆ ಹೆಚ್ಚು ಗಮನ ತರಲಾಯಿತು…

ಕರ್ನಾಟಕ ವಸ್ತು ಪ್ರದರ್ಶನ ವನ್ನು ರಾಜ್ಯ ಸರ್ಕಾರ ಪ್ರಗತಿ ಮೈದಾನ ಎಂದು ಘೊಷಿಸಿದೆ ಆದರೆ ಇದಕ್ಕೆ ಯಾವುದೇ ರೀತಿಯ ಅನುದಾನ ದ ಬಗ್ಗೆ ಘೋಷಣೆ ಆಗಿಲ್ಲ ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ಕೊಡಬೇಕು ಎಂದು ಕೋರಿದರು.

ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ಮಾಡಿರುವುದು ಹೆಮ್ಮೆಯ ಸಂಗತಿ ಆದರೆ ರಾಜ್ಯದ ಜನರು ಮೈಸೂರಿನ ಜನತೆಯ ಒತ್ತಾಯ ದಸರಾ ಪ್ರಾಧಿಕಾರ ರಚನೆ ಮಾಡಬೇಕು ಎಂದು ಇದರ ಬಗ್ಗೆ ಬಜೆಟ್ ನಲ್ಲಿ ಯಾವುದೇ ರೀತಿಯ ಪ್ರಸ್ತಾವನೆ ಇಲ್ಲದ್ದು ನನಗೆ ಬೇಸರ ತಂದಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಖಾಸಗಿ ಇಂಜಿನಿಯರ್ ಕಾಲೇಜುಗಳು ಹೆಚ್ಚು ಇದ್ದು ಬಡ ಹಾಗೂ ಮಧ್ಯಮ ವರ್ಗದ ಜನರ ಕಷ್ಟ ಹೆಚ್ಚಾಗಿದೆ ಅತಿಹೆಚ್ಚು ಡೊನೇಷನ್ ಕೊಟ್ಟು ವಿದ್ಯಾಭ್ಯಾಸ ಮಾಡುವುದು ಕಷ್ಟ ವಾಗಿದು ಸರ್ಕಾರ ಮುಂದಿನ ಮುಂಗಡ ಬಜೆಟ್ ನಲ್ಲಿ ಮೈಸೂರು ಜೆಲ್ಲೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ನನ್ನು ಘೋಷಣೆ ಮಾಡಬೇಕೇಂದು ಕೊರಲಾಯಿತು.

ಹಿಂದಿನ ಲೇಖನಬೆಂಗಳೂರು: ತಂದೆ-ತಾಯಿಯನ್ನೇ ಕೊಲೆ ಮಾಡಿದ ಮಗ
ಮುಂದಿನ ಲೇಖನಮೂರು ಜ್ಯೋತಿ ಯೋಜನೆಗಳನ್ನು ಗೃಹ ಜ್ಯೋತಿ ಯೋಜನೆಯಲ್ಲಿ ವಿಲೀನ: ರಾಜ್ಯದ ಅರ್ಧ ಕೋಟಿ  ಕುಟುಂಬಗಳಿಗೆ ನೇರ ಲಾಭ