ಮನೆ ರಾಜಕೀಯ ಕಾಂಗ್ರೆಸ್ ಅಸ್ತಿತ್ವಕ್ಕೆ ಪ್ರತಿಭಟನೆ: ಎಸ್.ಟಿ.ಸೋಮಶೇಖರ್

ಕಾಂಗ್ರೆಸ್ ಅಸ್ತಿತ್ವಕ್ಕೆ ಪ್ರತಿಭಟನೆ: ಎಸ್.ಟಿ.ಸೋಮಶೇಖರ್

0

ಮೈಸೂರು(Mysuru):  ಕಾಂಗ್ರೆಸ್‌‌(Congress)ನವರು ತಮ್ಮ ಅಸ್ತಿತ್ವಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಸ್ತಿತ್ವ ಉಳಿಸಿಕೊಳ್ಳಲು ಯಾವುದಾದರೂ ಕಾರ್ಯಕ್ರಮ ಮಾಡಬೇಕಲ್ವೆ. ನಾವು ಇದ್ದೀವಿ ಅಂತ ತೋರಿಸಿಕೊಳ್ಳೋಕೆ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪ್ರತಿಭಟನೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದು,  ಕಾಂಗ್ರೆಸ್ ಪ್ರತಿಭಟನೆಗೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ ಎಂದರು.

ಹಾಗೆಯೇ ಕಾಂಗ್ರೆಸ್ ಪದಾಧಿಕಾರಿಗಳ ನೇಮಕದ ಬಗ್ಗಯೂ ಲೇವಡಿ ಮಾಡಿದ ಎಸ್.ಟಿ ಸೋಮಶೇಖರ್, ನಮ್ಮ ಪಕ್ಷದಲ್ಲಿ ಒಬ್ಬ ಅಧ್ಯಕ್ಷ, ಮೂವರು ಪ್ರಧಾನ ಕಾರ್ಯದರ್ಶಿ, ಹತ್ತು ಮಂದಿ ಉಪಾಧ್ಯಕ್ಷರಿದ್ದಾರೆ. ಆದರೆ ಕಾಂಗ್ರೆಸ್ ಜಂಬೂ ಜಟ್, ನೂರ ನಲವತ್ತು, ನೂರವೈತ್ತು ಮಂದಿ ಮಾಡಿದ್ದಾರೆ ಎಂದರು.

ಧಾರವಾಡ ಕಲ್ಲಂಗಡಿ ವ್ಯಾಪಾರಿ ಮೇಲೆ ಹಲ್ಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕರಣಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಇದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಈ ಬಗ್ಗೆ ಪಕ್ಷದ ಹಿರಿಯರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಯಾವುದೇ ಹಿನ್ನೆಡೆ ಪಕ್ಷಕ್ಕೆ ಆಗಲ್ಲ ಎಂದರು.

ಚಂದ್ರು ಕೊಲೆ ಪ್ರಕರಣದಲ್ಲಿ ಶಾಸಕ ಜಮೀರ್ ಅಹ್ಮದ್ ಹೆಸರು ಪ್ರಸ್ತಾಪ ಹಿನ್ನೆಲೆ. ಗೃಹ ಸಚಿವರು ಸಮರ್ಥರಿದ್ದಾರೆ, ಅವರು ಈ ಬಗ್ಗೆ ಡಿಸೈಡ್ ಮಾಡ್ತಾರೆ. ಗೃಹಮಂತ್ರಿಗಳು ಈಗಾಗಲೇ ಸಿಐಡಿ ತನಿಖೆಗೆ ವಹಿಸಿ ಆರೋಪಿಗಳಿಗೆ ಕ್ರಮ ಆಗಬೇಕು ಅಂತ ಸೂಚನೆ ನೀಡಿದ್ದಾರೆ ಎಂದರು.

ನಾಳೆಯಿಂದ ಬಿಜೆಪಿ ಸಂಘಟನಾತ್ಮಕ ಯಾತ್ರೆ ವಿಚಾರ, ಇದು ಅವಧಿಗೂ ಮುನ್ನ ಚುನಾವಣೆಯ ತಯಾರಿ ಅಲ್ಲ. ನಾಳೆ ನಳೀನ್ ಕುಮಾರ್ ಕಟೀಲ್ ನೇತೃತ್ವದ ತಂಡ ಮೈಸೂರಿಗೆ ಬರಲಿದೆ. ಬೆಳಿಗ್ಗೆ ಕೋರ್ ಕಮಿಟಿ ಸಭೆ ನಡೆಯಲಿದೆ‌. ಪಕ್ಷದ ಆದೇಶದಂತೆ ಎಲ್ಲಾ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಹಾಲಿನ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಸ್.ಟಿ ಸೋಮಶೇಖರ್, ದರ ಏರಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ. ಆಯಾ ಸ್ಥಳೀಯ ಮಿಲ್ಕ್ ಯೂನಿಯನ್‌ ಗಳ ನಿರ್ಧಾರ ಎಂದರು.