ಮನೆ ಸುದ್ದಿ ಜಾಲ ಬಸ್ ಪಾಸ್ ಅವಧಿ ವಿಸ್ತರಣೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬಸ್ ಪಾಸ್ ಅವಧಿ ವಿಸ್ತರಣೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

0

ಮೈಸೂರು(Mysuru): ಬಸ್ ಪಾಸ್ ಅವಧಿ ವಿಸ್ತರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕಚೇರಿ ಮುಂಭಾಗ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಬಸ್ ಪಾಸ್ ವಿಚಾರದಲ್ಲಿ ಕೆಎಸ್ಆರ್ ಟಿಸಿ ಅವೈಜ್ಞಾನಿಕ ನಿರ್ಣಯ ಕೈಗೊಂಡಿದೆ ಎಂದು ಕಿಡಿಕಾರಿದರು.

ಕಳೆದ ಸೆಪ್ಟೆಂಬರ್ ನಲ್ಲಿ ಬಸ್ ಪಾಸ್ ವಿತರಣೆ ಮಾಡಲಾಗಿದೆ. ತರಗತಿಗಳು ನವೆಂಬರ್ ನಲ್ಲಿ ಪ್ರಾರಂಭವಾಗಿದೆ. ಆದರೇ ಸಾರಿಗೆ ಇಲಾಖೆ ಜೂನ್ ತಿಂಗಳಿಗೆ ಪಾಸ್ ಅಂತ್ಯ ಎಂದು ಹೇಳಿದೆ. ಇದರಿಂದ ವಿದ್ಯಾರ್ಥಿಗಳು ಹಣ ಪಾವತಿ ಮಾಡಿ ಸಂಚಾರ ಮಾಡಬೇಕಿದೆ.

ಪಾಸ್ ವಿಸ್ತರಣೆ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಕೂಡಲೆ ಕೆಎಸ್ ಆರ್ ಟಿಸಿ ತಮ್ಮ ನಿರ್ಧಾರ ಕೈ ಬಿಡಬೇಕು. ಸೆಮಿಸ್ಟರ್ ಮುಗಿಯುವವರೆಗೂ ಪಾಸ್ ಅವಧಿ ವಿಸ್ತರಣೆ ಮಾಡುವಂತೆ ಆಗ್ರಹಿಸಿದರು.

ಹಿಂದಿನ ಲೇಖನಬಿಸಿಯೂಟದ ತೊಗರಿ ಬೇಳೆ ಮಾರಾಟ ಮಾಡಿದ್ದ ಮುಖ್ಯ ಶಿಕ್ಷಕನ ಅಮಾನತು
ಮುಂದಿನ ಲೇಖನಪ್ರತಾಪ್ ಸಿಂಹ- ಎಂ.ಲಕ್ಷ್ಮಣ್ ವಾಕ್ಸಮರ: ಬಹಿರಂಗ ಚರ್ಚೆಗೆ ಮತ್ತೊಮ್ಮೆ ದಿನಾಂಕ ನಿಗದಿ