ಮನೆ ಅಪರಾಧ ಪಿಎಸ್ ಐ ನೇಮಕಾತಿ ಹಗರಣ: ವಿಚಾರಣೆಗೆ ಒಳಗಾಗಿದ್ದ ಗಣಪತಿ ಭಟ್ ಆತ್ಮಹತ್ಯೆ

ಪಿಎಸ್ ಐ ನೇಮಕಾತಿ ಹಗರಣ: ವಿಚಾರಣೆಗೆ ಒಳಗಾಗಿದ್ದ ಗಣಪತಿ ಭಟ್ ಆತ್ಮಹತ್ಯೆ

0

ಶಿರಸಿ: ಪೊಲೀಸ್ ನೇಮಕಾತಿ ಹಗರಣದಲ್ಲಿ ವಿಚಾರಣೆಗೆ ಒಳಗಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನೆಲಮಾವ ಹೇರೂರು ಗ್ರಾಮದಗಣಪತಿ ಬಿ ಭಟ್ (55)ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರು ಹೇರೂರೂ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಈ ಹಿಂದೆ ರಾಜ್ಯದಲ್ಲಿ ನಡೆದ ಅಕ್ರಮ ಪಿಎಸ್ ಐ ನೇಮಕಾತಿ ಹಗರಣದಲ್ಲಿ ಇವರನ್ನಬೆಂಗಳೂ ರುಪೊಲೀಸರು ವಶಕ್ಕೆ ಪಡೆದು ಕೆಲ ದಿನಗಳ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದರು. ಬಳಿಕ ಅವರು ಊರಲ್ಲೆ ಉಳಿದು ಕೊಂಡಿದ್ದು, ಈಗಲ್ಲೂ ಸಹ ಆಗಾಗ ವಿಚಾರಣೆಗೆ ಹಾಜರಾಗುತ್ತಿದ್ದರು ಎನ್ನಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಇದುವರೆಗೆ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಹಿಂದಿನ ಲೇಖನಪಿಂಜಾರ, ನದಾಫ್ ಸೇರಿದಂತೆ 13 ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ
ಮುಂದಿನ ಲೇಖನಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ