ಮನೆ ರಾಜ್ಯ ರೇಣುಕಾಚಾರ್ಯರನ್ನ ಜೈಲಿಗೆ ಹಾಕಿ – ಮಾಜಿ ಶಾಸಕ ರಾಮಪ್ಪ ಆಗ್ರಹ

ರೇಣುಕಾಚಾರ್ಯರನ್ನ ಜೈಲಿಗೆ ಹಾಕಿ – ಮಾಜಿ ಶಾಸಕ ರಾಮಪ್ಪ ಆಗ್ರಹ

0

ದಾವಣಗೆರೆ : ಗಣೇಶ ಹಬ್ಬ ಮುಗಿಯುವ ತನಕ ಮಾಜಿ ಸಚಿವ ರೇಣುಕಾಚಾರ್ಯ ಅವರನ್ನು ಜೈಲಿಗೆ ಹಾಕಿ ಎಂದು ಮಾಜಿ ಶಾಸಕ ಎಸ್.ರಾಮಪ್ಪ ಆಗ್ರಹಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವೇಳೆ, ಗಣೇಶ ಹಬ್ಬದ ಮೆರವಣಿಗೆಯಲ್ಲಿ ಡಿಜೆ ಬಳಕೆ ನಿಷೇಧಿಸಿದ್ದಾರೆ. ಇದಕ್ಕೆ ನಮ್ಮ ಸ್ವಾಗತವಿದೆ. ಆದರೆ, ಜಿಲ್ಲಾಧಿಕಾರಿಗಳ ಅಧಿಕೃತ ಆದೇಶಕ್ಕೆ ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ. ಓರ್ವ ಮಾಜಿ ಸಚಿವರಾಗಿ ರೇಣುಕಾಚಾರ್ಯ ಅವರಿಗೆ ಇಂತಹ ಹೇಳಿಕೆ ಗೌರವ ತರುವಂತಹದ್ದಲ್ಲ ಎಂದರು.

ರೇಣುಕಾಚಾರ್ಯ ಅವರು ಜಿಲ್ಲಾಧಿಕಾರಿಗಳು ತಾಕತ್ ಇದ್ದರೆ ಡಿಜೆ ಪರವಾನಿಗೆ ನಿಷೇಧಿಸಿ ಎನ್ನುತ್ತಿದ್ದಾರೆ. ಈ ರೀತಿ ಹೇಳಿಕೆ ಸರಿಯಲ್ಲ, ಡಿಜೆಯಿಂದ ಶಾಲಾ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಬಿಜೆಪಿಯವರು ವಿಶೇಷವಾಗಿ ರೇಣುಕಾಚಾರ್ಯ ಅಂತವರು ಇಂತಹ ವಿಚಾರ ಇಟ್ಟುಕೊಂಡು ಪರಸ್ಪರ ಜಗಳ ಹಚ್ಚುವ ರಾಜಕೀಯ ಮಾಡಿತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿ, ಇಂತವರನ್ನು ಗಣೇಶ ಹಬ್ಬ ಮಗಿಯುವ ತನಕ ಜೈಲಿಗೆ ಹಾಕಬೇಕು. ಆಗ ಎಲ್ಲರೂ ಶಾಂತಿಯುತವಾಗಿ ಹಬ್ಬ ಮಾಡಬಹುದು ಎಂದು ಹೇಳಿದ್ದಾರೆ.