ವ್ಯಕ್ತಿಗಳ ಆಯಸ್ಸನ್ನು ಕುಂಠಿತಗೊಳಿಸುವುದರಿಂದ ಸೆಲ್ ಫೋನ್ ಗೋಪುರಗಳನ್ನು ತೆಗೆದುಹಾಕುವಂತೆ ಅರ್ಜಿದಾರರೊಬ್ಬರು ಮದ್ರಾಸ್ ಹೈಕೋರ್ಟ್ ನಲ್ಲಿ ಶುಕ್ರವಾರ ನಡೆದ ವಿಚಾರಣೆ ವೇಳೆ ಮಂಡಿಸಿದ ವಾದ ನ್ಯಾಯಾಲಯದ ಸ್ವಾರಸ್ಯಕರ ಅವಲೋಕನಕ್ಕೆ ಇಂಬು ನೀಡಿತು.
ಈ ವಾದಕ್ಕೆ ಪ್ರತ್ಯುತ್ತರ ನೀಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ಟಿ ರಾಜಾ ಅವರು ವಕೀಲರ ಬಳಿ ಫೋನ್ ಗಳು ಇರುವುದರಿಂದ ಈಗಾಗಲೇ ಅವರ ದೇಹದಲ್ಲಿ ವಿಕಿರಣಗಳಿವೆ ಎಂದರು.
“ನಿಮ್ಮ ಬಳಿ ಇದೀಗ ಎಷ್ಟು ಸೆಲ್ ಫೋನ್ ಇವೆ? ಮೇಲಿನ ಜೇಬಿನಲ್ಲೊಂದು ಕೆಳಗಿನ ಜೇಬಿನಲ್ಲೊಂದು. ವಿಕಿರಣ ಈಗ ನಿಮ್ಮ ದೇಹದಲ್ಲೇ ಇದೆ” ಎಂದು ಅರ್ಜಿದಾರರಿಗೆ ನ್ಯಾಯಾಲಯ ಹೇಳಿತು.
ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ ಅಮೇರಿಕಾ ಹಾಗೂ ಏಷ್ಯಾ ಸೇರಿದಂತೆ ಪ್ರತಿಯೊಂದು ದೇಶ ಮತ್ತು ಖಂಡಗಳಲ್ಲಿ ಅಸ್ತಿತ್ವದಲ್ಲಿವೆ ಎಂದು ನ್ಯಾ ರಾಜಾ ಹೇಳಿದರು.
ಗಮನಾರ್ಹವಾಗಿ, ಸೆಲ್ ಫೋನ್ ಗೋಪುರಗಳು ವಿಕಿರಣ ಸೂಸುತ್ತವೆ ಎಂಬ ಆತಂಕಕ್ಕೆ ವೈಜ್ಞಾನಿಕ ಬೆಂಬಲ ಇಲ್ಲ ಎಂದು ಜೂನ್ 2019ರಲ್ಲಿ, ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಎನ್ ಆನಂದ್ ವೆಂಕಟೇಶ್ ಅವರು ಹೇಳಿದ್ದರು.
“ಸೆಲ್ ಫೋನ್ ಗೋಪುರಗಳು ಸೂಸುವ ವಿಕಿರಣದ ಪರಿಣಾಮದ ಬಗ್ಗೆ ಕೇವಲ ಆತಂಕ ಆಧರಿಸಿ ಗೋಪುರಗಳನ್ನು ನಿರ್ಮಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಈ ನ್ಯಾಯಾಲಯ ಸತತವಾಗಿ ಅಭಿಪ್ರಾಯಪಟ್ಟಿದೆ. ಆತಂಕಕ್ಕೆ ವೈಜ್ಞಾನಿಕ ಬೆಂಬಲ ಇಲ್ಲ. ಸಕಾರಾತ್ಮಕ ಫಲಿತಾಂಶ ದೊರೆಯುವವರೆಗೆ ಕೇವಲ ಆತಂಕದ ನೆಲೆಯಲ್ಲಿ ಗೋಪುರ ಸ್ಥಾಪಿಸುವುದನ್ನು ತಡೆಯುವಂತಿಲ್ಲ” ಎಂದು ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ರಿಲಯನ್ಸ್ ಜಿಯೋ ಸೆಲ್ ಫೋನ್ ಗೋಪುರಗಳನ್ನು ಸ್ಥಾಪಿಸುವವರಿಗೆ ಪೊಲೀಸ್ ರಕ್ಷಣೆ ನೀಡುವಂತೆ ಅದು ಸೂಚಿಸಿತ್ತು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.