ಮನೆ ಅಪರಾಧ ರಾಯಚೂರು: ತಂದೆಯನ್ನೇ ಹತ್ಯೆಗೈದ ಮಗ

ರಾಯಚೂರು: ತಂದೆಯನ್ನೇ ಹತ್ಯೆಗೈದ ಮಗ

0

ರಾಯಚೂರು: ತಲೆ ಮೇಲೆ ಕಲ್ಲು ಎತ್ತಿಹಾಕಿ ಮಗನೇ ತಂದೆಯನ್ನು ಕೊಲೆ ಮಾಡಿದ ಭೀಕರ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ದೇವರಭೂಪೂರಿನಲ್ಲಿ ನಡೆದಿದೆ.

ತಂದೆ ಬಂಡಿ ತಿಮ್ಮಣ್ಣ(55)ನನ್ನೇ ಪುತ್ರ ಶೀಲವಂತ ಕೊಲೆಗೈದಿದ್ದಾನೆ.

ತಂದೆ ಬಂಡಿ ತಿಮ್ಮಣ್ಣ ಪ್ರತಿ ದಿನ ಗಾಂಜಾ, ಮದ್ಯ ಸೇವಿಸಿ ತಾಯಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಕೋಪಗೊಂಡ ಮಗ, ತಂದೆಯನ್ನೇ ಕೊಲೆ ಮಾಡಿ ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಲಿಂಗಸುಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿ ಶೀಲವಂತ, ತಂದೆಯಿಂದ ತಾಯಿಗೆ ಸಿಗುತ್ತಿದ್ದ ಕಿರುಕುಳ ನೋಡಲಾಗದೆ ಕಲ್ಲು ಎತ್ತಿಹಾಕಿ ತಂದೆಯನ್ನು ಕೊಲೆ ಮಾಡಿದ್ದಾನೆ. ಬಳಿಕ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

ಮೊದಲು ತಂದೆ ಕೊಲೆಗೈದು ಪ್ರಕರಣ‌ ಮುಚ್ಚಿ ಹಾಕಲು ಯತ್ನಿಸಿದ್ದ. ಮನೆಯ ಹೊರಗಡೆ ತಂದೆಯನ್ನು ಕೊಂದು ಬಳಿಕ ಮೃತದೇಹವನ್ನು ಮನೆಯೊಳಗೆ ಎಳೆದೊಯ್ದು ಸಾಕ್ಷಿ ನಾಶಕ್ಕೆ ಯತ್ನಿಸಿದ್ದ. ಮೃತದೇಹ ತೀವ್ರ ರಕ್ತಸಿಕ್ತವಾದ್ದರಿಂದ ಅನಿವಾರ್ಯವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕಾಯಿತು. ನಿತ್ಯ ಕುಡಿದು ಬಂದು ತಾಯಿಗೆ ಹಾಗೂ ಕುಟುಂಬಸ್ಥರಿಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ತಾಯಿಯ ನೋವು ಸಹಿಸಲಾಗದೇ ತಂದೆಯನ್ನು ಕೊಂದಿದ್ದಾಗಿ ಆರೋಪಿ ಶೀಲವಂತ ಮಾಹಿತಿ ನೀಡಿದ್ದಾನೆ.

ಸ್ಥಳಕ್ಕೆ ಲಿಂಗಸುಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಿಂದಿನ ಲೇಖನಜಿಪಿಎ ರದ್ದು ಮಾಡುವ ಅಧಿಕಾರ ಸಬ್ ರಿಜಿಸ್ಟ್ರಾರ್ ಗೆ ಇಲ್ಲ: ಹೈಕೋರ್ಟ್
ಮುಂದಿನ ಲೇಖನನೀರಾವರಿ ಪಂಪ್‍ಸೆಟ್‍ಗಳಿಗೆ  7 ಗಂಟೆಗಳ ವಿದ್ಯುತ್ ಸರಬರಾಜು: ಮುಖ್ಯಮಂತ್ರಿ ಸಿದ್ದರಾಮಯ್ಯ