ಮನೆ ರಾಜ್ಯ ರಾಜ್ಯದಲ್ಲಿ ಮೂರು ದಿನ ಮಳೆ ಸಾಧ್ಯತೆ

ರಾಜ್ಯದಲ್ಲಿ ಮೂರು ದಿನ ಮಳೆ ಸಾಧ್ಯತೆ

0

ಬೆಂಗಳೂರು (Bengaluru): ರಾಜ್ಯದಲ್ಲಿ ಇನ್ನು ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ನಾಳೆವರೆಗೆ ಬಹುತೇಕ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಬೆಂಗಳೂರು, ಮಂಗಳೂರು , ಉಡುಪಿ, ರಾಮನಗರ, ಉತ್ತರ ಕನ್ನಡ, ಚಾಮರಾಜನಗರ, ಮಂಡ್ಯ, ರಾಮನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ಬೆಳಗಾವಿ, ಕೊಪ್ಪಳ ಹಾಗೂ ತುಮಕೂರಿನಲ್ಲಿ ಮಳೆಯ ಮುನ್ಸೂಚನೆ ಸಿಕ್ಕಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದಲ್ಲಿ ಜಲಪ್ರಳಯ ಉಂಟಾಗಲಿದ್ದು, ಗಣೇಶ ಹಬ್ಬಕ್ಕೆ ತಣ್ಣೀರೆರಚಿಸುವ ಸಾಧ್ಯತೆಗಳಿವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ, ವಿಜಯಪುರ ಹಾಗೂ ಬೀದರ್‌ ನಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಉಳಿದಂತೆ ಮಂಗಳೂರಿನಲ್ಲಿ 29- 24, ಶಿವಮೊಗ್ಗದಲ್ಲಿ 31-21, ಬೆಳಗಾವಿಯಲ್ಲಿ 29-21, ಮೈಸೂರಿನಲ್ಲಿ 30-21, ಮಂಡ್ಯದಲ್ಲಿ 31-21, ಕೊಡಗಿನಲ್ಲಿ 26-18, ರಾಮನಗರದಲ್ಲಿ 30-21, ಹಾಸನದಲ್ಲಿ 28-19, ಚಾಮರಾಜನಗರದಲ್ಲಿ 29-21, ಚಿಕ್ಕಬಳ್ಳಾಪುರದಲ್ಲಿ 28-19, ಕೋಲಾರದಲ್ಲಿ 29-21, ತುಮಕೂರಿನಲ್ಲಿ 29-21, ಉಡುಪಿಯಲ್ಲಿ 29-24, ಕಾರವಾರದಲ್ಲಿ 29-25, ಚಿಕ್ಕಮಗಳೂರಿನಲ್ಲಿ 28-19, ದಾವಣಗೆರೆಯಲ್ಲಿ 31-22, ಚಿತ್ರದುರ್ಗದಲ್ಲಿ 31-21, ಹಾವೇರಿಯಲ್ಲಿ 31-22, ಬಳ್ಳಾರಿಯಲ್ಲಿ 32-23, ಗದಗದಲ್ಲಿ 31-22, ಕೊಪ್ಪಳದಲ್ಲಿ 31-22, ರಾಯಚೂರಿನಲ್ಲಿ 32-23, ಕಲಬುರಗಿಯಲ್ಲಿ 32-23, ಬಾಗಲಕೋಟೆಯಲ್ಲಿ 31-23 ಡಿಗ್ರಿ ಸೆಲ್ಸಿಯಸ್ ಇರಲಿದೆ. ‌

ಹಿಂದಿನ ಲೇಖನಇಂದಿನ ಚಿನ್ನ-ಬೆಳ್ಳಿ ದರದ ವಿವರ
ಮುಂದಿನ ಲೇಖನನಾಡಪ್ರಭು ಕೆಂಪೇಗೌಡರ ಥೀಮ್‌ ಪಾರ್ಕ್‌ ಗೆ ರಾಜ್ಯದೆಲ್ಲೆಡೆ ಮಣ್ಣು ಸಂಗ್ರಹ: 45 ದಿನಗಳ ಅಭಿಯಾನ