ಮನೆ ರಾಜ್ಯ ರಾಮನಗರ: ಸಂಪು ಕುಸಿದು ಬಾಲಕ ಸಾವು

ರಾಮನಗರ: ಸಂಪು ಕುಸಿದು ಬಾಲಕ ಸಾವು

0

ರಾಮನಗರ: ಸಂಪು ಕುಸಿದು ನೀರಿನಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಿಸಲು ಮುಂದಾದ ಮತ್ತೋರ್ವ ಬಾಲಕ ಸಾವನ್ನಪ್ಪಿದ ಘಟನೆ ಹೆಚ್. ಗೊಲ್ಲಹಳ್ಳಿ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

ಮೃತ ಬಾಲಕನನ್ನು 12 ವರ್ಷದ ಕೌಶಿಕ್ ಗೌಡ ಎಂದು ಗುರುತಿಸಲಾಗಿದೆ.

ಈತ ರಾಮನಗರ ತಾಲೂಕಿನ ಹೆಚ್.ಗೊಲ್ಲಹಳ್ಳಿ ಗ್ರಾಮದಲ್ಲಿರುವ ಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿ ಓದುತ್ತಿದ್ದ. ಮುಖ ತೊಳೆಯಲು ಹೋದಾಗ ಸಂಪು ಏಕಾಏಕಿ ಕುಸಿದಿದೆ. ಸಂಪನ್ನು ಇತ್ತೀಚೆಗಷ್ಟೇ ಕಟ್ಟಿಸಲಾಗಿತ್ತು ಎನ್ನಲಾಗಿದೆ.

ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಡಿಎಂಕೆ ಜೊತೆ ಚರ್ಚಿಸಿ ಕಾವೇರಿ ನದಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿ:  ಬಿಎಸ್ ವೈ ಸಲಹೆ
ಮುಂದಿನ ಲೇಖನಹಲ್ಲಿನ ಸಮಸ್ಯೆಗಳು