ಮನೆ ರಾಜ್ಯ ರಾಮನಗರ: ಗ್ರಾಮದ ಕೆರೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ- ಆತಂಕಕ್ಕೊಳಗಾದ ಗ್ರಾಮಸ್ಥರು

ರಾಮನಗರ: ಗ್ರಾಮದ ಕೆರೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ- ಆತಂಕಕ್ಕೊಳಗಾದ ಗ್ರಾಮಸ್ಥರು

0

ರಾಮನಗರ: ಚನ್ನಪಟ್ಟಣ ತಾಲೂಕಿನ‌ ಸಂತೆ ಮೊಗೇನಹಳ್ಳಿ ಗ್ರಾಮದ ಕೆರೆಯಲ್ಲಿ ಬೆಳ್ಳಂಬೆಳಗ್ಗೆ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕನಕಪುರದಲ್ಲಿ ಕಳೆದ ಒಂದು ತಿಂಗಳಲ್ಲಿ ಒಂಟಿ ಸಲಗ ದಾಳಿಗೆ ನಾಲ್ವರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳದಿಂದ ಜೀವ ಭಯದಲ್ಲೇ ಜಿಲ್ಲೆಯ ಜನರು ಜೀವನ ನಡೆಸುತ್ತಿದ್ದಾರೆ. ಈ ನಡುವೆ ಜೀವಭಯವಿದ್ದರೂ ಗಜರಾಜನ ಜಲಕ್ರೀಡೆ ನೋಡಲು ಗ್ರಾಮದ ಜನ ಮುಗಿಬಿದ್ದಿದ್ದಾರೆ.

ತೆಂಗಿನ‌ಕಲ್ಲು ಅರಣ್ಯ ಪ್ರದೇಶದಿಂದ ನಾಡಿನತ್ತ ಒಂಟಿ ಸಲಗ ಬಂದಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಂದೆಡೆ ಹೊಂಗನೂರು ಮುಖ್ಯ ರಸ್ತೆಗೆ ಸಲಗ ಬಾರದಂತೆ ಸಾರ್ವಜನಿಕರು ಪಟಾಕಿ ಸಿಡಿಸುತ್ತಿದ್ದಾರೆ. ಸಂಜೆವರೆಗೂ ಸಲಗ ಕೆರೆಯಲ್ಲಿ ತಂಗುವಂತೆ ಅರಣ್ಯ ಸಿಬ್ಬಂದಿ ಯೋಜನೆ ರೂಪಿಸಿದ್ದು, ಸಂಜೆ ಬಳಿಕ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಸಲಗ ಓಡಿಸಲು ಅರಣ್ಯ ಸಿಬಂದಿ ಉಪಾಯ ಹೂಡಿದ್ದಾರೆ.

ಹಿಂದಿನ ಲೇಖನಸೂಟ್‍ ಕೇಸ್‍ ನಲ್ಲಿ ಮಗುವಿನ ಶವದೊಂದಿಗೆ ಕಾರ್ ನಲ್ಲಿ ತೆರಳುತಿದ್ದ ಸ್ಟಾರ್ಟ್​ ಅಪ್​ ಕಂಪನಿಯ ಮಹಿಳಾ ಸಿಇಒ ಬಂಧನ
ಮುಂದಿನ ಲೇಖನಸಂಸ್ಕರಿಸಿದ ನೀರು ನೇರ ಬಳಕೆ ವಿರುದ್ದ ಕಠಿಣ ಕ್ರಮ: ಸಚಿವ ಎನ್ ಎಸ್ ಭೋಸರಾಜು