ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ್ದ ಮುಂಬೈ ಮೂಲದ ಕಾನೂನು ಸಂಸ್ಥೆ ಹುಳ್ಯಾಲ್ಕರ್ ಅಂಡ್ ಅಸೋಸಿಯೇಟ್ಸ್’ಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ₹ 5,000 ದಂಡ ವಿಧಿಸಿದೆ.
ಬಳಿಕ ಕಾನೂನು ಸಂಸ್ಥೆಯ ಸೂಚನೆಯಂತೆ ಅರ್ಜಿದಾರರ ಪರ ವಕೀಲ ಝೈದ್ ಅನ್ವರ್ ಖುರೇಷಿ ಅವರು ಅರ್ಜಿದಾರೆ ಸಂತ್ರಸ್ತೆಯ ಹೆಸರು ಮಸುಕಾಗಿಸಲು ನ್ಯಾಯಾಲಯದ ಅನುಮತಿ ಕೋರಿದರು.
ಇದಕ್ಕೆ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ಪೃಥ್ವಿರಾಜ್ ಕೆ ಚವಾಣ್ ಅವರಿದ್ದ ವಿಭಾಗೀಯ ಪೀಠ ಅನುಮತಿ ನೀಡಿತಾದರೂ ಐಪಿಸಿ ಸೆಕ್ಷನ್ 228ಎ ಸೂಚನೆಯ ಹೊರತಾಗಿಯೂ, ವಕೀಲರು ಅತ್ಯಾಚಾರ ಸಂತ್ರಸ್ತರ ಗುರುತು ಬಹಿರಂಗಪಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
“ಅತ್ಯಾಚಾರ ಸಂತ್ರಸ್ತರ ಹೆಸರು ಬಹಿರಂಗಪಡಿಸುವುದು ಎರಡು ವರ್ಷ ಶಿಕ್ಷೆ ವಿಧಿಸಬಹುದಾದ ಅಪರಾಧ ಎಂದು ಐಪಿಸಿ ಸೆಕ್ಷನ್ 228 ಎಯಲ್ಲಿ ಹೇಳಿದ್ದರೂ ಮತ್ತು ವಕೀಲರಿಗೆ ಪದೇಪದೇ ಸಲಹೆ ನೀಡಿದ್ದರೂ ಮೇಲೆ ತಿಳಿಸಿದ ಅರ್ಜಿಯಲ್ಲಿ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಲಾಗಿದೆ” ಎಂದು ಅದು ಹೇಳಿತು.
ಹೀಗಾಗಿ ಎರಡು ವಾರಗಳೊಳಗೆ ₹ 5,000 ದಂಡದ ಮೊತ್ತವನ್ನು ಕೀರ್ತಿಕಾರ್ ಕಾನೂನು ಗ್ರಂಥಾಲಯದಲ್ಲಿ ಠೇವಣಿ ಇಡುವಂತೆ ಕಾನೂನು ಸಂಸ್ಥೆಗೆ ನ್ಯಾಯಾಲಯ ಸೂಚಿಸಿತು.