ಮನೆ ಸ್ಥಳೀಯ ಖಾಸಗಿ ಬಸ್‌ಗಳ ಸಂಚಾರದ ಮೇಲಿನ ನಿರ್ಬಂಧ

ಖಾಸಗಿ ಬಸ್‌ಗಳ ಸಂಚಾರದ ಮೇಲಿನ ನಿರ್ಬಂಧ

0

ಮೈಸೂರು: ನಾಡ ಹಬ್ಬ ದಸರಾ ಅಂಗವಾಗಿ ಅಕ್ಟೋಬರ್ 15 ರಿಂದ 24 ರವರೆಗೆ ಪ್ರತಿ ದಿನ ಸಂಜೆ 04 ರಿಂದ ರಾತ್ರಿ 11.00 ಗಂಟೆಯವರೆಗೆ ಖಾಸಗಿ ಬಸ್‌ ಗಳ ಸಂಚಾರದಲ್ಲಿ ಕೆಲವು ನಿರ್ಬಂಧಗಳನ್ನು ಮಾಡಲಾಗಿದೆ.

ಟಿ.ನರಸೀಪುರ ಕಡೆಗಳಿಂದ ಮೈಸೂರು ನಗರಕ್ಕೆ ಆಗಮಿಸುವ ಖಾಸಗಿ ಬಸ್‌ ಗಳು: (ಆಗಮನ) ಟಿ.ನರಸೀಪುರ-ಟಿ ಜಂಕ್ಷನ್- ಆರ್.ಮಹದೇವಪ್ಪ ವೃತ್ತ – ರಾಜಕುಮಾರ್ ರಸ್ತೆ ಉದಯಗಿರಿ ಕೆ.ಇ.ಬಿ ಜಂಕ್ಷನ್ ಬಲ ತಿರುವು – ಮಹದೇವಪುರ ರಸ್ತೆ – ಮಹದೇವಪುರ ರಿಂಗ್ ರಸ್ತೆ ಜಂಕ್ಷನ್-ಎಡ ತಿರುವು – ರಿಂಗ್ ರಸ್ತೆ -ಪುಷ್ಪಾಶ್ರಮ ಜಂಕ್ಷನ್ – ನಾಡಪ್ರಭು ಕೆಂಪೇಗೌಡ ವೃತ್ತ ಎಡ – ತಿರುವು – ಹೊಸ ಬೆಂಗಳೂರು ಮೈಸೂರು ರಸ್ತೆ – ದಂಡಿನ ಮಾರಮ್ಮ ದೇವಸ್ಥಾನ ಜಂಕ್ಷನ್ – ಲಿಂಕ್ ರಸ್ತೆ ಜಂಕ್ಷನ್-ಬಲ ತಿರುವು ಟಿ.ಎನ್.ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ)- ನೆಲ್ಸನ್ ಮಂಡೇಲಾ ರಸ್ತೆ- ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ವೃತ್ತ)- ಸುಭಾಷ್‌ಚಂದ್ರ ಬೋಸ್ ವೃತ್ತ (ಆರ್.ಎಂ.ಸಿ ವೃತ್ತ)- ಖಾಸಗಿ ಬಸ್ ನಿಲ್ದಾಣ.

ನಿರ್ಗಮನ: ಖಾಸಗಿ ಬಸ್ ನಿಲ್ದಾಣ- ಸುಭಾಷ್‌ಚಂದ್ರ ಬೋಸ್ ವೃತ್ತ (ಆರ್.ಎಂ.ಸಿ ವೃತ್ತ)- ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ವೃತ್ತ) – ನೆಲ್ಸನ್ ಮಂಡೇಲಾ ರಸ್ತೆ – ಟಿ.ಎನ್.ನರಸಿಂಹಮೂರ್ತಿ ವೃತ್ತ – (ಎಲ್.ಐ.ಸಿ ವೃತ್ತ)- ಎಡ ತಿರುವು – – ಬೆಂಗಳೂರು ಮೈಸೂರು ರಸ್ತೆ – ಜೆ.ಎಸ್.ಎಸ್ ಡೆಂಟಲ್ ಕಾಲೇಜು ಜಂಕ್ಷನ್ – ನಂದಿ ಬಸಪ್ಪ ಗೋರಿ ಜಂಕ್ಷನ್ – ಟೋಲ್ ಗೇಟ್ ಜಂಕ್ಷನ್ ಎಡ ತಿರುವು – ನಾಡಪ್ರಭು ಕೆಂಪೇಗೌಡ ವೃತ್ತ ಬಲ ತಿರುವು – ರಿಂಗ್ ರಸ್ತೆ – ಪುಷ್ಪಾಶ್ರಮ ಜಂಕ್ಷನ್ – ಮಹದೇವಪುರ ರಿಂಗ್ ರಸ್ತೆ ಜಂಕ್ಷನ್ ಬಲ ತಿರುವು – ಮಹದೇವಪುರ ರಸ್ತೆ – ಉದಯಗಿರಿ ಕೆ.ಇ.ಬಿ ಜಂಕ್ಷನ್ – ಎಡ ತಿರುವು ರಾಜಕುಮಾರ್ ರಸ್ತೆ – ಆರ್.ಮಹದೇವಪ್ಪ ವೃತ್ತ- ಟಿ.ನರಸೀಪುರ-ಬಿ ಜಂಕ್ಷನ್ ಮೂಲಕ ಮುಂದೆಸಾಗುವುದು.

ಬನ್ನೂರು ಕಡೆಗಳಿಂದ ಮೈಸೂರು ನಗರಕ್ಕೆ ಆಗಮಿಸುವ ಖಾಸಗಿ ಬಸ್‌ ಗಳು : (ಆಗಮನ) ದೇವೇಗೌಡ ವೃತ್ತ- ಮಹದೇವಪುರ ರಿಂಗ್ ರಸ್ತೆ ಜಂಕ್ಷನ್ – ಪುಷ್ಪಾಶ್ರಮ ಜಂಕ್ಷನ್ – ನಾಡಪ್ರಭು ಕೆಂಪೇಗೌಡ ವೃತ್ತ – ಎಡ ತಿರುವು – ಬೆಂಗಳೂರು ಮೈಸೂರು ರಸ್ತೆ – ದಂಡಿನ ಮಾರಮ್ಮ ದೇವಸ್ಥಾನ ಜಂಕ್ಷನ್ ಲಿಂಕ್ ರಸ್ತೆ ಜಂಕ್ಷನ್ ಬಲ ತಿರುವು – ಟಿ.ಎನ್.ನರಸಿಂಹಮೂರ್ತಿ ವೃತ್ತ (ಎಲ್.ಐ.ಸಿ ವೃತ್ತ)- ನೆಲ್ಸನ್ ಮಂಡೇಲಾ ರಸ್ತೆ- ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ವೃತ್ತ)- ಸುಭಾಷ್‌ಚಂದ್ರ ಬೋಸ್ ವೃತ್ತ (ಆರ್.ಎಂ.ಸಿ ವೃತ್ತ)- ಖಾಸಗಿ ಬಸ್ ನಿಲ್ದಾಣ.

ನಿರ್ಗಮನ: ಖಾಸಗಿ ಬಸ್ ನಿಲ್ದಾಣ – ಸುಭಾಷ್‌ಚಂದ್ರ ಬೋಸ್ ವೃತ್ತ (ಆರ್.ಎಂ.ಸಿ ವೃತ್ತ)- ಅಬ್ದುಲ್ ಕಲಾಂ ಆಜಾದ್ ವೃತ್ತ (ಹೈವೇ ವೃತ್ತ) ನೆಲ್ಸನ್ ಮಂಡೇಲಾ ರಸ್ತೆ ಟಿ.ಎನ್.ನರಸಿಂಹಮೂರ್ತಿ ವೃತ್ತ-(ಎಲ್.ಐ.ಸಿ ವೃತ್ತ)- ಎಡ ತಿರುವು- ಬೆಂಗಳೂರು ಮೈಸೂರು ರಸ್ತೆ – ಜೆ.ಎಸ್.ಎಸ್ ಡೆಂಟಲ್ ಕಾಲೇಜು ಜಂಕ್ಷನ್-ನoದಿ ಬಸಪ್ಪ ಗೋರಿ ಜಂಕ್ಷನ್ – ಟೋಲ್ ಗೇಟ್ ಎಡ ತಿರುವು -ನಾಡಪ್ರಭು ಕೆಂಪೇಗೌಡ ವೃತ್ತ – ಬಲ ತಿರುವು- ಜಂಕ್ಷನ್ ರಿಂಗ್ ರಸ್ತೆ – ಪುಷ್ಪಾಶ್ರಮ ಜಂಕ್ಷನ್ – ಮಹದೇವಪುರ ರಿಂಗ್ ರಸ್ತೆ ಜಂಕ್ಷನ್ – ದೇವೇಗೌಡ ವೃತ್ತ~ ಎಡ ತಿರುವು – ಬನ್ನೂರು ರಸ್ತೆ ಮೂಲಕ ಮುಂದೆ ಸಾಗುವುದು.

 ಕೆ.ಆರ್.ಎಸ್.ನಿಂದ ನಗರಕ್ಕೆ ಆಗಮಿಸುವ ಖಾಸಗಿ ಬಸ್‌ ಗಳು: ಕೆ.ಆರ್.ಎಸ್.ರಸ್ತೆ – ವಿ.ವಿ.ಪುರಂ ವೃತ್ತ – ಆಕಾಶವಾಣಿ ವೃತ್ತ – ದಾಸಪ್ಪ ವೃತ್ತ ಮೂಲಕ ಧನ್ವಂತ್ರಿ ರಸ್ತೆ ಪ್ರವೇಶಿಸಿ ಗಾಯತ್ರಿ ಭವನ್ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸುವುದು ಹಾಗೂ ಹತ್ತಿಸಿಕೊಂಡು ಎಡ ತಿರುವು ಪಡೆದು ಜೆ.ಕೆ ಗ್ರೌಂಡ್ ಜಂಕ್ಷನ್‌ನಲ್ಲಿ ಎಡ ತಿರುವು – ಬಾಬು ಜಗಜೀವನರಾಂ ವೃತ್ತ ದಾಸಪ್ಪ ವೃತ್ತದಲ್ಲಿ ಬಲ ತಿರುವು ಪಡೆದು ಕೆ.ಆರ್.ಎಸ್. ರಸ್ತೆ ಮೂಲಕ ಮುಂದೆ ಸಾಗುವುದು.

ಅ.23 ರಿಂದ 24 ರವರೆಗೆ: ಟಿ.ನರಸೀಪುರ ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಖಾಸಗಿ ಬಸ್‌ಗಳು ಟಿ.ನರಸೀಪುರ ರಸ್ತೆ – ಟಿ ನರಸೀಪುರ-ಟಿ ಜಂಕ್ಷನ್ ಮೂಲಕ ಲಲಿತಮಹಲ್ ರಸ್ತೆ ಪ್ರವೇಶಿಸಿ ಹೋಟೆಲ್ ಲಲಿತಮಹಲ್‌ಗೆ ಹೊಂದಿಕೊAಡಿರುವ ಲಲಿತಮಹಲ್ ಆಟದ ಮೈದಾನದಲ್ಲಿ ಬಸ್ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ / ಹತ್ತಿಸಿಕೊಂಡು ಟಿ.ನರಸೀಪುರ ಟಿ-ಜಂಕ್ಷನ್ ಮೂಲಕ ಮುಂದೆ ಸಾಗಬೇಕು. (ನಗರದ ಕಡೆಗೆ ಪ್ರವೇಶಿಸುವಂತಿಲ್ಲ.)

ಬನ್ನೂರು ಕಡೆಗಳಿಂದ ಮೈಸೂರು ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಖಾಸಗಿ ಬಸ್‌ ಗಳು : ದೇವೇಗೌಡ ವೃತ್ತ- ಆರ್.ಮಹದೇವಪ್ಪ ವೃತ್ತ- ಟಿ ನರಸೀಪುರ-ಟಿ ಜಂಕ್ಷನ್ ಮೂಲಕ ಲಲಿತಮಹಲ್ ರಸ್ತೆ ಪ್ರವೇಶಿಸಿ ಹೋಟೆಲ್ ಲಲಿತಮಹಲ್‌ಗೆ ಹೊಂದಿಕೊAಡಿರುವ ಲಲಿತಮಹಲ್ ಆಟದ ಮೈದಾನದಲ್ಲಿ ಬಸ್ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ / ಹತ್ತಿಸಿಕೊಂಡು ಟಿ.ನರಸೀಪುರ ಟಿಜಂಕ್ಷನ್- ಆರ್.ಮಹದೇವಪ್ಪ ವೃತ್ತ- ಬನ್ನೂರು ರಸ್ತೆ ಮೂಲಕ ಮುಂದೆ ಸಾಗಬೇಕು. (ನಗರದ ಕಡೆಗೆ ಪ್ರವೇಶಿಸುವಂತಿಲ್ಲ.)

ಕೆ.ಆರ್.ಎಸ್.ನಿoದ ನಗರಕ್ಕೆ ಬರುವ ಮತ್ತು ಹೋಗುವ ಖಾಸಗಿ ಬಸ್‌ಗಳು: ದಾಸಪ್ಪ ವೃತ್ತದ ಬಸ್ ನಿಲ್ದಾಣದ ಬಳಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಮೆಟ್ರೋಪೋಲ್ ವೃತ್ತದ ಬಳಿ ಬಲ ತಿರುವು ಪಡೆದು ಹುಣಸೂರು ರಸ್ತೆ ಮೂಲಕ ಮುಂದೆ ಸಾಗಬೇಕು ಎಂದು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನವಾಹನ ಸಂಚಾರ ಹಾಗೂ ವಾಹನ ನಿಲುಗಡೆ ಮೇಲೆ ನಿರ್ಬಂಧ
ಮುಂದಿನ ಲೇಖನಮೈಸೂರು ದಸರಾ: ಸಚಿವ ಕೆ.ಹೆಚ್. ಮುನಿಯಪ್ಪ ಅವರಿಂದ ಆಹಾರ ಮೇಳದ ಪೋಸ್ಟರ್ ಬಿಡುಗಡೆ