ಮನೆ ರಾಜ್ಯ ದರೋಡೆ ಕೇಸ್‌; ಹಿಂದಿ ಭಾಷೆ, ಕೈಯಲ್ಲಿ ಗನ್‌ ಹಿಡಿದಿದ್ರು – ಎಸ್‌ಪಿ ವಿಷ್ಣುವರ್ಧನ್

ದರೋಡೆ ಕೇಸ್‌; ಹಿಂದಿ ಭಾಷೆ, ಕೈಯಲ್ಲಿ ಗನ್‌ ಹಿಡಿದಿದ್ರು – ಎಸ್‌ಪಿ ವಿಷ್ಣುವರ್ಧನ್

0

ಮೈಸೂರು : ಹುಣಸೂರು ಪಟ್ಟಣದ ಸ್ಕೈ ಗೋಲ್ಡ್ & ಡೈಮಂಡ್ಸ್‌ ಅಂಗಡಿಯಲ್ಲಿ ಮಟಮಟ ಮಧ್ಯಾಹ್ನವೇ ದರೋಡೆ ನಡೆದಿದೆ. ದರೋಡೆ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ವಿವರವಾಗಿ ಮಾತನಾಡಿದ್ದಾರೆ.

ಗನ್ ತೋರಿಸಿ ದರೋಡೆ ಮಾಡಿದ್ದು, ಇಬ್ಬರು ಮುಖ ಮುಚ್ಚಿಕೊಂಡಿದ್ದಾರೆ. ಮತ್ತೆ ಮೂವರು ಮುಖ ಮುಚ್ಚಿಕೊಂಡಿಲ್ಲ. ಎಷ್ಟು ಪ್ರಮಾಣದ ಚಿನ್ನಾಭರಣ ದೋಚಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಒಟ್ಟಾರೆ, ಐದು ಜನರಿಂದ ದರೋಡೆ ನಡೆದಿದ್ದು, ತನಿಖೆಗೆ ಐದು ತಂಡ ರಚನೆ ಮಾಡಿದ್ದೇವೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ದರೋಡೆಕೋರರು, ಹಿಂದಿ ಮಾತಾಡುತ್ತಿದ್ದರು. ಎಲ್ಲರ ಕೈಯಲ್ಲೂ ಗನ್ ಇದ್ವು ಎಂದು ಹೇಳಿದ್ದಾರೆ. ಸದ್ಯಕ್ಕೆ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಏನಿದು ಪ್ರಕರಣ..? – ರಾಜ್ಯದಲ್ಲಿ ಬ್ಯಾಂಕ್‌ಗಳು, ಎಟಿಎಂಗಳ ಬಳಿಕ ಇದೀಗ ಜ್ಯುವೆಲ್ಲರಿ ಶಾಪ್‌ಗಳ ದರೋಡೆ ಶುರುವಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ನಗರದಲ್ಲಿ ಚಿನ್ನದ ಅಂಗಡಿ ದರೋಡೆ ಆಗಿದೆ. ಹುಣಸೂರು ಬಸ್ ನಿಲ್ದಾಣದ ಹಿಂಭಾಗದ ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್‌ ಆಭರಣ ಅಂಗಡಿಗೆ ನುಗ್ಗಿದ 5 ಜನ ದರೋಡೆಕೋರರು, ಅಪಾರ ಪ್ರಮಾಣದ ಚಿನ್ನಾಭರಣ ಲೂಟಿ ಮಾಡಿದ್ದಾರೆ ಎಂದು ಹೇಳಲಾಗಿದೆ.