ಮನೆ ಅಪರಾಧ ಸರಣಿ ಅಪಘಾತ: ಕಾರು ಸೇರಿ ಸಾರಿಗೆ ಎರಡು ಬಸ್‌ ಗಳಿಗೆ ಡಿಕ್ಕಿ

ಸರಣಿ ಅಪಘಾತ: ಕಾರು ಸೇರಿ ಸಾರಿಗೆ ಎರಡು ಬಸ್‌ ಗಳಿಗೆ ಡಿಕ್ಕಿ

0

ಶ್ರೀರಂಗಪಟ್ಟಣ: ಮೈಸೂರು -ಬೆಂಗ ಳೂರು ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನದ ಬ್ರೇಕ್ ಫೇಲ್ ಆಗಿ ಕಾರು ಸೇರಿ ಎರಡು ಸಾರಿಗೆ ಬಸ್ ಗೆ ಡಿಕ್ಕಿ ಹೊಡೆದು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಪಟ್ಟಣದ ಸಾರಿಗೆ ನಿಲ್ದಾಣದ ಬಳಿಯ ಹೆದ್ದಾರಿಯಲ್ಲಿ ನಡೆದಿದೆ.

Join Our Whatsapp Group

ಹತ್ತಿಬೆಲೆ ಗ್ರಾಮದ ಕ್ಯಾಂಟರ್ ಚಾಲಕ ವಿವೇಕ್ ಹಾಗೂ ಸಾರಿಗೆ ಬಸ್ ಚಾಲಕರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.
ಬ್ರೇಕ್ ಫೇಲ್ ಆಗಿದ್ದ ಸರಕು ತುಂಬಿದ್ದ ಕ್ಯಾಂಟರ್ ಮೈಸೂರು ಕಡೆಯಿಂದ ಬೆಂಗಳೂರಿಗೆ ತೆರಳಲು ಹೊಗುತ್ತಿದ್ದ ಕ್ಯಾಂಟರ್‌ನ್ನು ಬ್ರೇಕ್ ಒತ್ತಿ ನಿಲ್ಲಿಸಲಾಗದೆ ಚಾಲಕ ಅಪಘಾತ ತಪ್ಪಿಸಲು ನಿಧಾನವಾಗಿ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಸಾರಿಗೆ ಬಸ್ ನಿಲ್ದಾಣದಿಂದ ಮೈಸೂರು ಕಡೆಗೆ ಹೋಗಲು ಎರಡು ಸಾರಿಗೆ ಬಸ್‌ಗಳು ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ವೇಗ ಕಡಿಮೆ ಇದ್ದ ಕಾರಣಕ್ಕೆ ಮುಂದೆ ಇದ್ದ ಕಾರಿಗೂ ಮೊದಲು ಕ್ಯಾಂಟರ್ ಡಿಕ್ಕಿ ಹೊಡೆದಿದೆ, ನಂತರ ಸಾರಿಗೆ ಬಸ್ ಗಳಿಗೂ ಡಿಕ್ಕಿ ಹೊಡೆದು ಮುಂದೆ ಹೋಗದೆ ಬಸ್ ತಡೆಯಿಂದ ಕ್ಯಾಂಟರ್‌ನಿಂತಿದೆ.

ಇದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಪ್ರಯಾಣಿಕರೂ ಕೂಡ ಸುರಕ್ಷಿತವಾಗಿದ್ದಾರೆ.ಸ್ಥಳಕ್ಕೆ ಪೊಲೀಸರು ಆಗಮಿಸಿ ರಸ್ತೆಯಲ್ಲಿದ್ದ ಅಪಘಾತವಾದ ವಾಹನಗಳ ತೆರವು ಮಾಡಿ,ರಸ್ತೆ ಸುರಕ್ಷತೆಗೊಳಿಸಿದ್ದಾರೆ.

ಹಿಂದಿನ ಲೇಖನಲೈಂಗಿಕ ದೌರ್ಜನ್ಯ-ಕಿಡ್ನ್ಯಾಪ್‌ ಪ್ರಕರಣ: ಕಾನೂನು ಹೋರಾಟಕ್ಕಿಳಿದ ಶಾಸಕ ಎಚ್ ​ಡಿ ರೇವಣ್ಣ
ಮುಂದಿನ ಲೇಖನದೊರೆಯದಣ್ಣ ಮುಕುತಿ