ಮನೆ ಅಪರಾಧ ಶಿವಮೊಗ್ಗ: ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಆರೋಪಿ ಕಾಲಿಗೆ ಗುಂಡೇಟು

ಶಿವಮೊಗ್ಗ: ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಆರೋಪಿ ಕಾಲಿಗೆ ಗುಂಡೇಟು

0

ಶಿವಮೊಗ್ಗ(Shivamogga): ಶಿವಮೊಗ್ಗದಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಮೊಳಗಿದೆ. ರೌಡಿಶೀಟರ್ ಪ್ರವೀಣ್ ಅಲಿಯಾಸ್ ಮೋಟು ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.

ಪ್ರಕರಣವೊಂದರಲ್ಲಿ ಬಂಧನಕ್ಕೆ ತೆರಳಿದ್ದ ವೇಳೆ ಗ್ರಾಮಾಂತರ ಠಾಣೆ ಪೊಲೀಸ್ ಕ್ರೈಂ ಸಿಬ್ಬಂದಿ ಶಿವರಾಜ್ ಮೇಲೆ ಹಲ್ಲೆ ಪ್ರವೀಣ್ ಹಲ್ಲೆ ಮಾಡಲು ಮುಂದಾಗಿದ್ದ.

ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್’ಐ ರಮೇಶ್ ಎಚ್ಚರಿಕೆ ನೀಡಿದರೂ ಮೋಟು ಪ್ರವೀಣ್ ನಿರ್ಲಕ್ಷ್ಯ ಮಾಡಿದ್ದು, ತನ್ನ ಸಿಬ್ಬಂದಿ ರಕ್ಷಣೆಗಾಗಿ ಪಿಎಸ್’ಐ ರಮೇಶ್ ಅವರು ಮೋಟು ಪ್ರವೀಣ್ ಕಾಲಿಗೆ  ಫೈರಿಂಗ್ ಮಾಡಿದ್ದಾರೆ.. ಗುಂಡೇಟು ತಿಂದ ಪ್ರವೀಣ್ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್’ಗೆ ದಾಖಲಿಸಲಾಗಿದೆ.

ರೌಡಿ ಪ್ರವೀಣ್ ಮೂರು ತಿಂಗಳ ಹಿಂದೆ ಸಾರ್ವಜನಿಕವಾಗಿ ಮಹಿಳೆಯನ್ನು ಥಳಿಸಿದ್ದ. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದ. ದೂರು ಕೊಟ್ಟಿದ್ದ ಮಹಿಳೆಯ ಮನೆಯ ಮುಂದೆ ನಿಂತಿದ್ದ ಹೊಸ ಕಾರನ್ನು ಸುಟ್ಟು ಆಕೆಯ ವಿರುದ್ದ ರೌಡಿಶೀಟರ್ ಪ್ರವೀಣ್ ಸೇಡು ತೀರಿಸಿಕೊಂಡಿದ್ದ.  ಕೇಸ್ ವಾಪಸ್ ಪಡೆಯಲು ತಾಯಿ- ಮಗನಿಗೆ ಜೀವ ಬೆದರಿಕೆ ಹಾಕಿದ್ದ, ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿತ್ತು.

ಹಿಂದಿನ ಲೇಖನವಿಧಾನಸಭೆಯಲ್ಲಿ ವೀರ ಸಾವರ್ಕರ್ ಭಾವಚಿತ್ರ ಅನಾವರಣ: ಸುವರ್ಣಸೌಧ ಮೆಟ್ಟಿಲುಗಳ ಮೇಲೆ ಕಾಂಗ್ರೆಸ್ ಧರಣಿ
ಮುಂದಿನ ಲೇಖನಸಿರವಾರ ಪೊಲೀಸ್ ಠಾಣೆಯ ಪಿಎಸ್’ಐ ಗೀತಾಂಜಲಿ ಶಿಂಧೆ ಅಮಾನತು