ಮನೆ ಸುದ್ದಿ ಜಾಲ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಕೆ.ಆರ್.ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಸಭೆ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಕೆ.ಆರ್.ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಸಭೆ

0

ಮೈಸೂರು (Mysuru)-ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕೆ.ಆರ್.ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಇಂದು ಕಾರ್ಯಾಗಾರ ಸಭೆ ನಡೆಯಿತು.

ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮಾತನಾಡಿ, 4 ಜಿಲ್ಲೆಯ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸದಲ್ಲಿಟ್ಟುಕೊಂಡು ಸಂಘಟನೆಯಲ್ಲಿ ಮೈ.ವಿ.ರವಿಶಂಕರ್ ತೊಡಗಿದ್ದಾರೆ. ಕಳೆದ ಚುನಾವಣೆಯಲ್ಲಿ  ಕೆಲವೇ ಅಂತರದಲ್ಲಿ ಸೋತರೂ ಸಹ ಅವರು ಮತದಾರರೊಂದಿಗೆ ಸಂಪರ್ಕ ಕಳೆದುಕೊಂಡಿರಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪದವೀಧರರಿಗೆ ಏನೇನು ಯೋಜನೆಗಳನ್ನ ನೀಡಿದೆ ಎಂದು ನಾವು ಮತದಾರರ ಬಳಿಯಲ್ಲಿ ಹೇಳಿಕೊಂಡು ಮತ ಹಾಕುವಂತೆ ಮನವಿ ಮಾಡಬೇಕು ಎಂದರು.

ಶಾಸಕರಾದ ಎಸ್.ಎ.ರಾಮದಾಸ್‌ ಮಾತನಾಡಿ, ಮೇ 18 ರಂದು ಕೆ.ಆರ್.ಕ್ಷೇತ್ರದಲ್ಲಿ ಮತದಾರರ ಮಹಾ ಸಂಪರ್ಕವನ್ನು ಮಾಡಲಿದ್ದೇವೆ. ಈ ದೃಷ್ಟಿಯಿಂದ  ರಾಜ್ಯದಿಂದ ಬರುವಂತಹ ಆದೇಶ, ಸೂಚನೆಯನ್ನು ಪಾಲಿಸಿಕೊಂಡು ಮೊದಲನೇ ಪ್ರಾಶಸ್ತ್ಯದ ಮತವನ್ನು ಮೈ.ವಿ.ರವಿಶಂಕರ್ ಅವರಿಗೆ ನೀಡಿ ಎಂದು ನಾವು ಪ್ರಚಾರಕ್ಕೆ ಹೋದಾಗ ಕೇಳಬೇಕು. ಆದಷ್ಟು ಹೆಚ್ಚಿನ ಮತಗಳು  ಈ ಬಾರಿ ಬರುವಂತೆ ನಾವೆಲ್ಲ ಕೆಲಸ ಮಾಡಬೇಕಿದೆ ಎಂದರು.

ಮೈಸೂರು ನಗರ ಪ್ರಭಾರಿಗಳಾದ ಹೀರೇಂದ್ರ ಶಾ, ದಕ್ಷಿಣ ಪದವೀಧರರ ಚುನಾವಣಾ ಉಸ್ತುವಾರಿ ಹಾಗೂ ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ನಗರ ಬಿಜೆಪಿ ಅಧ್ಯಕ್ಷರಾದ ಶ್ರೀವತ್ಸ, ಮೈಸೂರು ಗ್ರಾಮಾಂತರ ಅಧ್ಯಕ್ಷರಾದ ಶ್ರೀಮತಿ ಮಂಗಳ ಸೋಮಶೇಖರ್, ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಬಿಜೆಪಿ ಕೆ.ಆರ್.ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಓಂ ಶ್ರೀನಿವಾಸ್, ನಗರಪಾಲಿಕಾ ಸದಸ್ಯರಾದ ಶ್ರೀಮತಿ ಡಾ.ರೂಪಾ ಯೋಗೇಶ್, ಶ್ರೀಮತಿ ಛಾಯಾದೇವಿ ಉಪಸ್ಥಿತರಿದ್ದರು.