ಮನೆ ಪೌರಾಣಿಕ ಶ್ರೀಮನ್ನೋನಾರಾಯಣ ಸಾಕ್ಷಾತ್ಕಾರ

ಶ್ರೀಮನ್ನೋನಾರಾಯಣ ಸಾಕ್ಷಾತ್ಕಾರ

0

 ಅಧಿಪತಿಗಳ ನೇಮಕ :

    ಮೇನುವಿನ ಮಗನಾದ ಪೃಥು ಚಕ್ರವರ್ತಿಯನ್ನು ಮುನಿಗಳು ತಂದು ಸಿಂಹಾಸನದ ಮೇಲೆ ಅಧಿ ರೋಹಿಸಿದ ಮೇಲೆ ಬ್ರಹ್ಮ ಲೋಕದಲ್ಲಿ ಒಂದೊಂದು ಕಾರ್ಯಕ್ಕೂ ಒಬ್ಬ ಅಧಿಕಾರಿಯನ್ನು ನಿಯಮಿಸಿದನು.ಚಂದ್ರನನ್ನು ಅಧಿಪತಿಯಾಗಿ ಮಾಡಿ, ಆತನಿಗೆ ಗ್ರಹಗಳು, ನಕ್ಷತ್ರಗಳು, ವಿಪ್ರರು, ವೃಕ್ಷಗಳು, ಲತೆಗಳು, ನಿಕುಂಜಗಳು,  ತಪಸ್ಸುಗಳು, ಯಜ್ಞಗಳಿಗೆ ಅಧಿಪತ್ಯವನ್ನು ಪ್ರಾರ್ಥಿಸಿದನು.

Join Our Whatsapp Group

ಭೂಮಿಯನ್ನು ಪರಿಪಾಲಿಸುವ ಮಹಾರಾಜರಿಗೆ ವೈಶ್ರವಣನಾದ ಕುಬೇರನನ್ನು ಜಲಕ್ಕೆ ವರುಣ ದೇವನನ್ನು, ಅದಿತ್ಯರಿಗೆ ಇಂದ್ರಾನು ಜನಾದ ವಿಷ್ಣುವನ್ನು ನಿಯಮಿಸಿದನು. ಅಷ್ಟವಸುವರಿಗೆ ಪಾವಕಾಗ್ನಿಯನ್ನು, ಪ್ರಜಾಪತಿಗಳಿಗೆ ದಕ್ಷ ಪ್ರಜಾಪತಿಯನ್ನು ಮರುದ್ಗಣರಿಗೆ ವಾಸವನ್ನು ಮುನಿಂದ್ರರಿಗೆ ಕಪಿಲ ಮಹರ್ಷಿಯನ್ನು ದೈತ್ಯ ದಾನವರಿಗೆ ದಿತಿಗೂ ಧನುವಿಗೆ ಕಶ್ಯಪ್ಪ ಪ್ರಜಾಪ್ರತಿಯಿಂದ ಜನಿಸಿದ ಶಾಂತನ ಪ್ರಹ್ಲಾದನನ್ನು ಅಧಿಪತಿಗಳನ್ನಾಗಿ ಮಾಡಿದನು. ಯಮನು ಪಿತೃಗಣಗಳಿಗೂ, ಐರಾವತ ಆನೆಗಳಿಗೂ,ಪಕ್ಷಿಗಳಿಗೆ ಗರುತ್ಮಂತವನ್ನು ಮಹಾ ಸರ್ಪಗಳಿಗೆ ವಾಸಕೆಯನ್ನು ಕುದುರೆಗಳಿಗೆ ಉಚ್ಚೆ ಶ್ರಮವನ್ನು ಗೋವುಗಳಿಗೆ ವೃಷಭವನ್ನು ಮೃಗಗಳಿಗೆ ಕೇಸರಿಯನ್ನು. ಮನಸ್ಪತಿಗಳಿಗೆ ಪ್ಲಕ್ಷವನ್ನು ಪವರ್ತಗಳಿಗೆ ಹಿಮಾಲಯವನ್ನು ಬ್ರಹ್ಮನ ದಯೆಯಿಂದ ಅಧಿಪತ್ಯವನ್ನು ಪಡೆದ ಜಾತ್ಯ ಭಿವೃದ್ಧಿಯನ್ನು ಮುಂದುವರೆಸಿದರು.

    ಮೈತ್ರೇಯ ಈ ರೀತಿಯಾಗಿ ವಿಷ್ಣುವಿನ ಅಂಶಾವತಾರಗಳಾಗಿ ಜನಿಸಿ ಅಧಿಪತ್ಯವನ್ನು ವಹಿಸಿದ ಇವರೆಲ್ಲರ ಪರಿಪಾಲನಾ ವಿಶೇಷಗಳನ್ನು ಪ್ರತಿಯೊಬ್ಬರ ಜೀವನದ ಸನ್ನಿವೇಶಗಳನ್ನು ಕುರಿತು ಕ್ಷಮೀಕ್ಷಾ ರೂಪದಲ್ಲಿ ಲಘುವಾಗಿ ಹೇಳುವುದಕ್ಕೆ ಯಾರಿಂದಲೂ ಸಾಧ್ಯವಲ್ಲ.ಮಗೂ ಈ ಸಮಸ್ತ ಸೃಷ್ಟಿಯು ವಾಸುದೇವನ ಲೀಲಾ ವಿಳಾಸವೇ ಆಗಿದೆ.ಸಕಲ ಚರಾಚರಗಳ ಜೀವನ ಕಷ್ಟ ಸುಖಗಳ ಆತನ ಅಜ್ಞಾವಶರೇ ಆಗಿದ್ದಾರೆ ಈ ಕಾಲಸ್ವರೂಪವೆಲ್ಲಾ ಆತನ ಮಹಿಮೇ ಆಗಿದೆ. ಉತ್ತರಾಯಣ,ದಕ್ಷಿಣಾಯನಗಳು, ಪಾಡ್ಯಮಿ, ಬಿದಿಗೆ, ತದಿಗೆ,ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ,ಏಕಾದಶಿ, ದ್ವಾದಶೀ, ತ್ರಯೋದಶಿ, ಚತುರ್ದಶಿ, ಪೌರ್ಣಮೆ,ಅಮಾವಾಸ್ಯೆ,ಶುಕ್ಲಪಕ್ಷ, ಕೃಷ್ಣಪಕ್ಷಗಳು, ಚೈತ್ರ,ವೈಶಾಖ,ಜ್ಯೆಷ್ಠ, ಆಷಾಡ, ಶ್ರಾವಣ,ಭಾದ್ರಪದ,ಅಶ್ವಯುಜ, ಕಾರ್ತಿಕ,ಮಾರ್ಗಶಿರ,ಪುಷ್ಪಮಾಘ, ಪಾಲ್ಗುಣ ಮಾಸಗಳು ಪ್ರಭವಾದಿ ಸಂವತ್ಸರಗಳು ಕಳ, ಕ್ಷಣ, ಕಾಷ್ಠ, ನಿಮಿಷಾದಿಗಳಾದ ಕಾಲಗಳು ಆತನ ಅಭಿವ್ಯಕ್ತ ರೂಪಗಳೇ ಆಗಿವೆ. ಈ ಅನಂತ ಬ್ರಹ್ಮಾಂಡವೂ ಸಪ್ತದ್ವೀಪಗಳು, ಸಮಸ್ತ ನದಿಗಳು ಸಮುದ್ರಗಳಿಂದ ಕೂಡಿದ ಪ್ರಕೃತಿ ಸರ್ವಸ್ವವೂ ಆತನ ಆ ಜ್ಞಾನಮೂರ್ತಿಗಳೇ ಆಗಿವೆ. ದೇವತೆಗಳು,ದಾನವರು, ನರರು, ಕಿನ್ನರರು,ಗರುಡರು, ಗಂಧರ್ವರು, ಯಕ್ಷರು,ರಾಕ್ಷಸರು, ಮುಂತಾದ ಜೀವರಾಶಿಯು ಈ ಪರತ್ಪರನ  ಕರುಣೆಗೆ ನಿರ್ದೇಶನ .

    ಸದ್ಗುರುಗಳಿಂದ ಉಪದೇಶ ಪೂರಕವಾಗಿ ಗ್ರಹಿಸಿದ ಅಧ್ಯಾತ್ಮ  ವಿದ್ಯೆಗಳು, ಧರ್ಮ ರಕ್ಷಣೆಗಾಗಿ ಲೋಕ ಸಮರ್ಪಣೆಗಾಗಿ ಆಚರಿಸುವ ಮಹಾಯಜ್ಞಗಳು ಪರಮಾನಂದ ಅನುಭವಕಾಗಿ ವಿರಕ್ತಿ ಮಾರ್ಗಕ್ಕೆ ಪ್ರವೇಶಿಸಿ ಅನುಷ್ಠಾನ ಮಾಡುವ ಜಪ ತಪಗಳು ಇವೆಲ್ಲದರಲ್ಲಿಯೂ ಪಠಿಸಲ್ಪಡುವ ರಹಸ್ಯ ಮಂತ್ರ ವಾಜ್ಞಯ ಸರ್ವಸ್ವವೂ ವಾಸುದೇವನ ಅನಂತ ಶಕ್ತಿಯನ್ನು ಶಬ್ದ ರೂಪದಲ್ಲಿ ನಿರೂಪಿಸುತ್ತಿದೆ. ಪಂಚಭೂತಗಳು ತನ್ಮಾತ್ರ ಗುಣಗಳು, ಕರ್ಮೇಂದ್ರಿಯ, ಬುದ್ಧೀಂದ್ರಿಯಗಳು ಮುಂತಾದ ಸಚರಾಚರ ಪ್ರಪಂಚವೆಲ್ಲಾ ಶ್ರೀಮನ್ನಾರಾಯಣ ದಿವ್ಯ ಕೃಪಾದೀನ ಋಗ್ವೇದ, ಯಜುರ್ವೇದ, ಸಾಮವೇದ, ಅರ್ಥ ವರ್ಣವೇದಗಳು,ವೇದಾಂತ ರಾಶಿಗಳು, ನೀತಿಶಾಸ್ತ್ರಗಳು, ಮಾನ್ವಾದಿಗಳು ನಿಯಮಿಸಿದ ಧರ್ಮಶಾಸ್ತ್ರಗಳು, ಪುರಾಣಗಳು, ಉಪ ಪುರಾಣಗಳು, ಅನು ವಾಕಗಳು ಕಾವ್ಯಲಾಪಗಳು. ಸಂಗೀತಾದಿ ವಿದ್ಯೆಗಳು 64. ವ್ರತಗಳು ವ್ರತಕಲ್ಪಗಳು, ಮೂತ್ರಾ ಮೂರ್ತಿಗಳು ಎಲ್ಲವೂ ಆ ಪುರುಷೋತ್ತಮನ ಮೂರ್ತಿ ಭೇದಗಳಿಗಾಗಿ ಬೆಳಕುತ್ತಿವೆ. ಶ್ರೀ ಮಹಾ ವಿಷ್ಣು ಸರ್ವಾತ್ಮಗಳಿಗೂ  ಆಧಿದೇವರು, ಆತನನ್ನು ನಂಬಿದವರಿಗೆ ಯಾವ ಆಪತ್ತುಗಳು ಇಲ್ಲ.ನಿರ್ಮಲ ಚಿತ್ತದಿಂದ ಈ ಮಹಾನುಭಾವನನ್ನು ಆರಾಧಿಸಿದ ಭಕ್ತರಿಗೆ ಕಷ್ಟಗಳು ನಾಶವಾಗಿ ಕರರ್ಮಾಂತದಲ್ಲಿ ಭಗವಂತನ ಸಾಯುಜ್ಯ ಭಾಗ್ಯವು ಉಂಟಾಗುತ್ತದೆ.ಈ ಪುರಾಣವನ್ನು ಭಕ್ತಿ ಶ್ರದ್ಧೆಗಳೊಂದಿಗೆ ಪಠಿಸಿದ, ಆಲಿಸಿದ ಪುಣ್ಯಾತ್ಮನಿಗೆ ಕಾರ್ತಿಕ ಮಾಸದಲ್ಲಿ ವೈಷ್ಣವವ್ರತವನ್ನು 12 ವರ್ಷಗಳು ನಿಯಮ ನಿಷ್ಠೆಗಳೊಂದಿಗೆ ಆಚರಿಸಿ, ಪುಷ್ಕರಣೆಯಲ್ಲಿ ತೀರ್ಥ ಸ್ಥಾನವನ್ನು ಮಾಡಿದ ಮಹಾಪಲವು ಲಭಿಸುತ್ತದೆ ಎಂದು ಪಾರಾಶರ ಮಹರ್ಷಿಯು ಶ್ರೀವಿಷ್ಣು ಮಹಿಮೆಯನ್ನು ಹೇಳಿದನು.