ಮನೆ ಸುದ್ದಿ ಜಾಲ ಸಾಮಾಜಿಕ, ಶೈಕ್ಷಣಿಕ ಸರ್ವೆ ವೇಳೆ ಸಿಬ್ಬಂದಿ ಸಾವು – ಪರಿಹಾರ ಘೋಷಣೆ

ಸಾಮಾಜಿಕ, ಶೈಕ್ಷಣಿಕ ಸರ್ವೆ ವೇಳೆ ಸಿಬ್ಬಂದಿ ಸಾವು – ಪರಿಹಾರ ಘೋಷಣೆ

0

ಬೆಂಗಳೂರು : ಸಾಮಾಜಿಕ, ಶೈಕ್ಷಣಿಕ ಸರ್ವೆ ಮಾಡುವಾಗ ಸಾವನ್ನಪ್ಪಿದ 3 ಸಿಬ್ಬಂದಿ ಕುಟುಂಬಕ್ಕೆ ಸರ್ಕಾರ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದೆ.

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 1.20 ಲಕ್ಷ ಶಿಕ್ಷಕರು, ಬೇರೆ 40 ಸಾವಿರ ಸಿಬ್ಬಂದಿ ಗಣತಿಯಲ್ಲಿ ಭಾಗಿಯಾಗಿದ್ದಾರೆ.

ಶಿಕ್ಷಕರಿಗೆ ಇತರೆ ಸರ್ವೆಯವರಿಗೆ 20 ಸಾವಿರ ರೂ. ಗೌರವ ಧನ ನೀಡಲಾಗುತ್ತದೆ. ಪ್ರತಿ ಮನೆಗೆ 100 ರೂ. ಕೊಡುತ್ತೇವೆ. ಲಮ್ ಸಮ್ 5 ಸಾವಿರ ರೂ. ಕೊಟ್ಟಿದ್ದೇವೆ ಅಲ್ಲಿಗೆ 20 ಸಾವಿರ ರೂ. ಆಗುತ್ತೆ. 19ರ ಒಳಗೆ ಪೂರ್ಣ ಪ್ರಮಾಣದಲ್ಲಿ ಸರ್ವೆ ಮುಗಿಯಲಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್‌ ಆರ್.‌ ನಾಯಕ್, ಸಿಎಸ್ ಶಾಲಿನಿ ರಜನೀಶ್ ಸೇರಿ ಹಲವರು ಭಾಗಿಯಾಗಿದ್ದರು.