ಮನೆ ಅಪರಾಧ ಪ್ರವಾಸಿಗರ ಬಸ್‌ ಹರಿದು ವಿದ್ಯಾರ್ಥಿ ಸಾವು: ಶಿವಮೊಗ್ಗ ಜಿಲ್ಲೆಯಲ್ಲಿ ದುರ್ಘಟನೆ

ಪ್ರವಾಸಿಗರ ಬಸ್‌ ಹರಿದು ವಿದ್ಯಾರ್ಥಿ ಸಾವು: ಶಿವಮೊಗ್ಗ ಜಿಲ್ಲೆಯಲ್ಲಿ ದುರ್ಘಟನೆ

0

ಶಿವಮೊಗ್ಗ: ಕಾಲೇಜಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ವಿದ್ಯಾರ್ಥಿ ಮೇಲೆ ಬಸ್ ಹರಿದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಬಸ್ ನಿಲ್ದಾಣದಲ್ಲಿ ಶುಕ್ರವಾರ (ಅ.18) ನಡೆದಿದೆ.

Join Our Whatsapp Group

ಪ್ರವಾಸಿಗರ ಬಸ್‌ ಓವರ್‌ಟೇಕ್‌ ಮಾಡುವಾಗ ಪ್ರಥಮ್‌ ಬಸ್‌ಚಾಲಕನ ನಿರ್ಲಕ್ಷ್ಯದಿಂದ ಬಸ್‌ ಹತ್ತಿರ ನಿಂತಿದ್ದ ವೇಳೆ ಅವಘಡ ಸಂಭವಿಸಿತು. ಪ್ರಥಮ್ ತೀರ್ಥಹಳ್ಳಿಯ ಪ್ರಥಮ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದು, ಸ್ಥಳೀಯ ಪಾಂಡ್ಯ ಗ್ರಾಮದ ನಿವಾಸಿಯಾಗಿದ್ದ.

ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿ ಪ್ರಥಮ್‌ ಕೊನೆಯುಸಿರೆಳೆದಿದ್ದು, ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.