ಮನೆ ಸುದ್ದಿ ಜಾಲ ಬೇಸಿಗೆ ಮುಕ್ತ ಕರಾಟೆ ಚಾಂಪಿಯನ್ ಶಿಫ್

ಬೇಸಿಗೆ ಮುಕ್ತ ಕರಾಟೆ ಚಾಂಪಿಯನ್ ಶಿಫ್

0

ನಂಜನಗೂಡು: ಯುವಕರು ದುಶ್ಚಟಗಳಿಂದ ದೂರವಿದ್ದು ದೇಹಕ್ಕೆ ಅಗತ್ಯ ವ್ಯಾಯಾಮ ನೀಡುವ ಕರಾಟೆಯಂತಹ ಆತ್ಮ ರಕ್ಷಣೆಯ ಕಲೆಯನ್ನು ಕಲಿಯಬೇಕು, ಶಾಲಾ ಮಕ್ಕಳಿಗೆ, ಪ್ರಮುಖವಾಗಿ ಬಾಲಕಿಯರಿಗೆ ಕಡ್ಡಾಯವಾಗಿ ಕರಾಟೆ ತರಬೇತಿ ನೀಡಬೇಕು ಎಂದು ಸಮುದ್ರ ಇಂಗ್ಲೀ? ಶಾಲೆಯ ಕಾರ್ಯದರ್ಶಿ ಡಾ.ಶ್ರೀಕಾಂತ್ ಹೇಳಿದರು.

ನಗರದ ನಂದಿ ಕನ್ವೆ?ನ್ ಹಾಲ್‌ನಲ್ಲಿ ನಡೆದ ಬೇಸಿಗೆ ಮುಕ್ತ ಕರಾಟೆ ಚಾಂಪಿಯನ್ ಶಿಫ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ವಿಶೇ?ವಾಗಿ ಮಹಿಳೆಯರು ತಮ್ಮ ಆತ್ಮರಕ್ಷಣೆಗಾಗಿ ಕರಾಟೆ ಕಲಿಯಬೇಕು, ಶಾಲೆಗಳಲ್ಲಿ ಮಕ್ಕಳಿಗೆ ಕರಾಟೆ ತರಬೇತಿ ನೀಡುವುದರಿಂದ ಮಕ್ಕಳು ಆರೋಗ್ಯವಂತವಾಗಿ ಬೆಳೆಯುತ್ತಾರೆ, ಜೊತೆಗೆ ದೈಹಿಕವಾಗಿ ಸದೃಢಗೊಂಡು, ಅವರ ವ್ಯಕ್ತಿತ್ವ ವಿಕಸನ ಹೊಂದಿ ಮುಂದಿನ ಬದುಕನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾದ್ಯವಾಗುತ್ತದೆ, ನಗರದಲ್ಲಿ ರೆನ್ಸಿ ಭರತೇಶ್ ತಮ್ಮ ಕರಾಟೆ ಶಾಲೆಯ ಮೂಲಕ ಉತ್ತಮ ತರಬೇತಿ ನೀಡುತ್ತಿದ್ದಾರೆ, ಎಂದ ಅವರು ಕರಾಟೆ ಪಟುಗಳು ಪಂದ್ಯದಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡಾ ಮನೋಭವ ಮೆರೆಯಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಕರಾಟೆ ಪಟುಗಳಿಗೆ ಸಂಸ್ಥೆಯ ನಿರ್ದೇಶಕ ಎಸ್.ಸುನೀಲ್ ಕುಮಾರ್ ಸ್ಮರಣ ಫಲಕ ನೀಡಿ ಸನ್ಮಾನಿಸಿದರು. ಕರಾಟೆ ಪಟುಗಳು ಕಥಾಶ್‌ಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಎನ್.ಉಮೇಶ್, ನಗರಸಭಾ ಸದಸ್ಯ ಪ್ರೊ.ಮಹೇಶ್ ಅತ್ತಿಖಾನೆ, ಡಾ.ಪವನ್ ಕುಮಾರ್, ಡಿ.ಪ್ರಸನ್ನಕುಮಾರ್, ಎಂ.ಪ್ರದೀಪ್, ಎಸ್.ಪಿ.ರಾಜೇಂದ್ರ ಪ್ರಸಾದ್, ಪಿ.ವಿಫುಲ್, ಬಿ.ರಾಜೇಶ್ ಭಾಗವಹಿಸಿದ್ದರು.