ಮನೆ ಅಪರಾಧ ಅಕ್ರಮ ಸಂಬಂಧ ಶಂಕೆ: ವ್ಯಕ್ತಿಯ ಬರ್ಬರ ಕೊಲೆ

ಅಕ್ರಮ ಸಂಬಂಧ ಶಂಕೆ: ವ್ಯಕ್ತಿಯ ಬರ್ಬರ ಕೊಲೆ

0

ನಾಗಮಂಗಲ(Naagamangala):  ಹಣಕಾಸು ವ್ಯವಹಾರ ನಡೆಸುವ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ  ಮಾಡಿರುವ ಘಟನೆ ಬೆಳ್ಳೂರಿನಿಂದ ಆರಣಿಗೆ ಹೋಗುವ ರಸ್ತೆ ಸಮೀಪದ ಅರಳಿಮರದ ಬಳಿ ನಡೆದಿದೆ

ತಾಲ್ಲೂಕ್ಕಿನ ಬೆಳ್ಳೂರು ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಸುನೀಲ್ ಕುಮಾರ್ ಹತ್ಯೆಯಾದ ವ್ಯಕ್ತಿ.

ಭಾನುವಾರ ರಾತ್ರಿ ಸುಮಾರು 10:30 ಹತ್ಯೆಮಾಡಲಾಗಿದ್ದು, ಕೊಲೆಯಾದ ಸುನಿಲ್ ಎಂಬಾತನು ಹಣಕಾಸು ವ್ಯವಹಾರ ನಡೆಸುತ್ತಿದ್ದು, ಕೆಲವರ ಜೊತೆ ಅಕ್ರಮ ಸಂಬಂಧವನ್ನೂ ಹೊಂದಿರುವುದು ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಡಿವೈ ಎಸ್ ಪಿ ನವೀನ್ ಕುಮಾರ್ ಸಿಪಿಐ ಸುಧಾಕರ್ ಸೇರಿದಂತೆ ಬೆಳ್ಳೂರು ಠಾಣೆಯ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.