ಮನೆ ರಾಜ್ಯ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಸುತ್ತೂರು ಶ್ರೀಗಳಿಂದ ಮತದಾನ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಸುತ್ತೂರು ಶ್ರೀಗಳಿಂದ ಮತದಾನ

0

ಮೈಸೂರು(Mysuru): ವಿಧಾನ ಪರಿಷತ್ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತದಾನ‌ ಮಾಡಿದರು.

ಚಾಮುಂಡಿಪುರಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ ’39ಎ’ನಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.

ಈ ಸಂದರ್ಭ ಮಾತನಾಡಿದ ಅವರು, ವಿಧಾನ ಪರಿಷತ್ ಅತ್ಯಂತ ಜವಾಬ್ದಾರಿ ಸಂಸ್ಥೆ. ಈ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಎಷ್ಟೇ ಕೆಲಸಗಳಿದ್ದರೂ ಪದವೀಧರರು ಬಂದು ಮತ ಚಲಾಯಿಸಬೇಕು. ವಿಧಾನಪರಿಷತ್ ಕಾರ್ಯಗಳು ಸುಗಮವಾಗಿ ನಡೆಯಲು ಸಹಕರಿಸಬೇಕು. ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಹೇಳಿದರು.

ಹಿಂದಿನ ಲೇಖನಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ 17.40 ಲಕ್ಷ ನಗದು ವಶ
ಮುಂದಿನ ಲೇಖನಬೆಳಗಾವಿ: ಕಿಡಿಗೇಡಿಗಳಿಂದ ನಾಲ್ಕು ಬೈಕ್‍ಗಳಿಗೆ ಬೆಂಕಿ