ಮನೆ ಅಪರಾಧ ಬೆಂಗಳೂರಲ್ಲಿ ಭೀಕರ ಅಪಘಾತ: ಮೂವರು ವಿದ್ಯಾರ್ಥಿಗಳ  ಸಾವು  

ಬೆಂಗಳೂರಲ್ಲಿ ಭೀಕರ ಅಪಘಾತ: ಮೂವರು ವಿದ್ಯಾರ್ಥಿಗಳ  ಸಾವು  

0

ಬೆಂಗಳೂರು: ಸ್ನೇಹಿತನ ಜನ್ಮದಿನ ಆಚರಿಸಿಕೊಳ್ಳಲು ಹೋದ ಮೂವರು ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚಿಕ್ಕಜಾಲ ಸಂಚಾರ ವ್ಯಾಪ್ತಿಯ ಏರ್​​ಪೋರ್ಟ್ ರಸ್ತೆಯಲ್ಲಿ ತಡರಾತ್ರಿ ಘಟನೆ ನಡೆದಿದೆ.

Join Our Whatsapp Group

ಸುಜಿತ್ ಮತ್ತು ಸ್ನೇಹಿತರಾದ ರೋಹಿತ್ ಹಾಗೂ ಹರ್ಷ ಮೃತರು. ಇವರು ಇಲ್ಲಿನ ಜಿಕೆವಿಕೆಯಲ್ಲಿ ಬಿಎಸ್​ ಸಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸುಜಿತ್ ಜನ್ಮದಿನ ಆಚರಿಸಲು ಐವರು ವಿದ್ಯಾರ್ಥಿಗಳು ಎರಡು ಬೈಕ್​ನಲ್ಲಿ ಏರ್​ಪೋರ್ಟ್​ ಕಡೆ ಲಾಂಗ್ ಡ್ರೈವ್​ಗೆ ತೆರಳಿದ್ದರು. ಸುಜಿತ್, ರೋಹಿತ್ ಹಾಗೂ ಹರ್ಷ ಒಂದೇ ಬೈಕಿನಲ್ಲಿದ್ದರೆ, ಮತ್ತೊಂದು ಬೈಕಿನಲ್ಲಿ ಇನ್ನಿಬ್ಬರು ತೆರಳಿದ್ದರು. ಜನ್ಮದಿನ ಆಚರಿಸಿ ವಾಪಸ್ ಬರುವಾಗ ಬೈಕ್-ಗೂಡ್ಸ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಾಹಿತಿ ಪಡೆದು ಚಿಕ್ಕಜಾಲ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಶೀಲನೆ ನಡೆಸಿದರು. ವಿದ್ಯಾರ್ಥಿಗಳ ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.