ಮನೆ ಅಪರಾಧ ಅತ್ಯಾಚಾರಕ್ಕೆ ಯತ್ನಿಸಿದ ಕಿಡಿಗೇಡಿಗೆ ಥಳಿತ: ಮಂಗಳಮುಖಿಯರಿಂದ ಯುವತಿ ರಕ್ಷಣೆ

ಅತ್ಯಾಚಾರಕ್ಕೆ ಯತ್ನಿಸಿದ ಕಿಡಿಗೇಡಿಗೆ ಥಳಿತ: ಮಂಗಳಮುಖಿಯರಿಂದ ಯುವತಿ ರಕ್ಷಣೆ

0

ಬೆಂಗಳೂರು(Bengaluru): ನಡುರಾತ್ರಿ ಯುವತಿ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಸ್ಥಳೀಯ ಮಂಗಳಮುಖಿಯರ ಸಹಾಯದಿಂದ ವಿವೇಕನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಉದ್ಯೋಗ ಅರಸಿ ಪಶ್ಚಿಮ ಬಂಗಾಳದಿಂದ  ಆಗಮಿಸಿದ್ದ ಯುವತಿ ವಿವೇಕನಗರದಲ್ಲಿ ವಾಸವಾಗಿದ್ದಳು. ಆಕೆ ಒಬ್ಬಳೇ ಇರುವುದನ್ನು ಗಮನಿಸಿದ ಅದೇ ಏರಿಯಾದ ಪಶ್ಚಿಮ ಬಂಗಾಳದ ಮೂಲದ ಆರೋಪಿ ಮಸೂರಲ್‌ ಶೇಕ್ ಆಕೆ ಮನೆ ಬಳಿ ಎರಡು – ಮೂರು ದಿನಗಳಿಂದ ಓಡಾಡುತ್ತಿದ್ದ. ಇದೇ ತಿಂಗಳು 2 ರಂದು ಮುಂಜಾನೆ ನಾಲ್ಕು ಗಂಟೆಗೆ ಬಾಗಿಲು ಬಡಿದಿದ್ದಾನೆ. ಬಾಗಿಲು ಓಪನ್ ಮಾಡ್ತಿದ್ದಂತೆ ಯುವತಿ ಮೇಲೆ ಎರಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದೆ.

ಹಣ ಎಷ್ಟು ಬೇಕಾದರೂ ಕೊಡುತ್ತೇನೆ ಬಿಟ್ಟು ಬಿಡು ಎಂದು ಅಂಗಲಾಚಿದ್ದಾಳೆ. ಯುವತಿ ಕಿರುಚಾಡುತ್ತಿದ್ದಂತೆ ಮೇಲಿನ ಪ್ಲ್ಯಾಟ್ ನಲ್ಲಿ ವಾಸವಿದ್ದ ತೃತೀಯ ಲಿಂಗಿ ಮಹಿರಾ ಸಿಂಗ್ ಮತ್ತು ಅವರ ಸ್ನೇಹಿತೆ ಯುವತಿಯನ್ನು ರಕ್ಷಿಸಿದ್ದಾರೆ. ಬಾಗಿಲು ಮುರಿದು ಹೊರ ಹಾಕಿ ಆರೋಪಿಗೆ ಚನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ವಿವೇಕನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು, ಆರೋಪಿ ಮಸೂರಲ್ ಖಾನ್ ಬಂಧಿಸಿದ್ದಾರೆ. ತೃತೀಯಲಿಂಗಿ ಮಹಿರಾ ಮತ್ತವರ ಸ್ನೇಹಿತೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಹಿಂದಿನ ಲೇಖನಮೈಸೂರು: ಕಬ್ಬಿನ ದರ ನಿಗದಿಗೆ ಒತ್ತಾಯಿಸಿ ರೈತರಿಂದ ಪ್ರತಿಭಟನಾ ಧರಣಿ
ಮುಂದಿನ ಲೇಖನಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣ ಬಿಜೆಪಿಯ ಭವ್ಯಗುರಿ: ಹೆಚ್ ಡಿಕೆ