ಇಬ್ಬರೂ ಋಷಿಗಳು ತಪಸ್ಸು ಮಾಡಿದ ಕಥೆ ನಿಮಗೆ ಗೊತ್ತಾ? ಒಮ್ಮೆ ಇಬ್ಬರು ಋಷಿಗಳು ದೇವರನ್ನು ಕುರಿತು ಒಟ್ಟಾಗಿ ತಪಸ್ಸು ಮಾಡಿದರಂತೆ. ದೀರ್ಘಕಾಲದ ತಪಸ್ಸು ಮಾಡಿದ ನಂತರ ದೇವರು ಪ್ರತ್ಯಕ್ಷನಾದನಂತೆ “ಭಕ್ತರೇ,.. ನಿಮ್ಮ ತಪಸ್ಸಿಗೆ ಮೆಚ್ಚಿದ್ದೇನೆ. ಏನು ಬೇಕು ಕೇಳಿ” ಎಂದರಂತೆ.
ಆಗ ಒಬ್ಬ ಋಷಿ “ಅವನಿಗೆ ಏನು ಬೇಕು ಕೊಟ್ಟು ಬಾ ನಂತರ ನನಗೇನು ಬೇಕೆಂದು ಕೇಳುತ್ತೇನೆ” ಎಂದರಂತೆ. “ಸರಿ” ಅಂದ ದೇವರು, ಇನ್ನೊಬ್ಬ ಋಷಿಯ ಬಳಿ ಹೋದನಂತೆ “ಇಲ್ಲ, ಇಲ್ಲ.. ಅವನೇ ಹಿರಿಯ. ಮೊದಲು ಅವನಿಗೆ ಏನು ಬೇಕು ಕೊಡಬೇಕು” ಎಂದನಂತೆ.
ಆಗ ದೇವರು “ಅವನಿಗೆ ಕೊಡೋಣವಂತೆ ,ಈಗ ನಿನ್ನ ಬಳಿ ಬಂದಿದ್ದೇನಲ್ಲ….. ನಿನಗೇನು ಬೇಕೆಂದು ಕೇಳು” ಎಂದನಂತೆ. ಈಗ ಋಷಿ ಬಹಳ ಯೋಚನೆ ಮಾಡಿ, ಕೇಳಿದ “ದೇವರೇ, ಆ ಇನ್ನೊಬ್ಬ ಋಷಿಗೆ ಏನನ್ನು ಕೊಡುತ್ತಿಯೋ, ಅದನ್ನೇ ಅವನಿಗೆ ಕೊಟ್ಟಿದ್ದಕ್ಕಿಂತ ಎರಡು ಪಟ್ಟು ಜಾಸ್ತಿ ನನಗೆ ಕೊಡು” ಎಂದು ಕೇಳಿದನಂತೆ. ಹಾಗೆ ಆಗಲಿ ಅಂದ ದೇವರು ಆ ಇನ್ನೊಬ್ಬ ಋಷಿಯ ಬಳಿ ಹೋದ.
ಋಷಿಗೆ ಈಗ ತುಂಬಾ ಪೇಚಾಟಕ್ಕಿಟ್ಟು ಕೊಂಡಿತು. ತಾನು ಏನನ್ನೇ ಕೇಳಿದರೂ ಎರಡು ಪಟ್ಟು ಜಾಸ್ತಿ ಇನ್ನೊಬ್ಬನಿಗೆ ಸಿಗುತ್ತದೆ. ಎಲಾ ಇವನಾ!.. ಬಾರಿ ಬುದ್ಧಿವಂತ ಎಂದುಕೊಂಡಿದ್ದಾನೆ. ಮಾಡ್ತೀನಿ ಅವನಿಗೆ ಎಂದುಕೊಂಡ ಋಷಿ “ದೇವರೇ..ನನಗೆ ಒಂದು ಕಾಲು, ಒಂದು ಕೈ, ಒಂದು ಕಣ್ಣು ಹೊರೆಟು ಹೋಗುವಂತೆ ಮಾಡು” ಎಂದನಂತೆ. ದೇವರು ಹಾಗೆ ಆಗಲಿ ಎಂದು ಅವನು ಒಂದು ಕಾಲು, ಒಂದು ಕೈ, ಒಂದು ಕಣ್ಣು ಹೊರಟುಹೋಯಿತು. ಆದರೂ ಅವನಿಗೆ ಸಂತೋಷ ಇನ್ನೊಬ್ಬ ಋಷಿಯ ಎರಡು ಕಾಲ್ಗಳು, ಎರಡು ಕೈಗಳು, ಎರಡು ಕಣ್ಣುಗಳು ಹೊರಟು ಹೋದವಲ್ಲ ಆದ್ದರಿಂದಾಗಿ ಅವನಿಗೆ ಸಂತೋಷ!
ಮನುಷ್ಯರು ಹೀಗೂ ಇರುತ್ತಾರೆ ಅಥವಾ ಮನುಷ್ಯರು ಇರುವುದೋ ಹೀಗೆ ಪಕ್ಕದವರಿಗೆ ಅಥವಾ ನಮಗೆ ಗೊತ್ತಿರುವ ಯಾರಿಗಾದರೂ ತೊಂದರೆ ಆದರೆ ನಮಗೆ ಏನೋ ಒಂದು ರೀತಿಯ ಸುಖಾನುಭವ ಆಗಲು ತೊಡಗುತ್ತದೆ. ಅಂತಹ ತೊಂದರೆಗಳು ಸ್ವಲ್ಪ ಒಳ್ಳೆಯ ಹೆಸರನ್ನು ತೆಗೆದುಕೊಂಡವರಿಗೆ ಆಗಿ ಬಿಟ್ಟರೆ ನಮಗಾದ ಸುಖದ ಅನುಭವ ಇನ್ನೂ ಜಾಸ್ತಿ ಆಗುತ್ತದೆ ನೀವು ಇದನ್ನು ಒಪ್ಪಿಕೊಳ್ಳದೆ ಇರಬಹುದು.
ಮೇಲ್ನೋಟಕ್ಕೆ ನಮಗೆ ಅರ್ಥವಾಗದಿರಬಹುದು ಆದರೆ ನಮಗೆ ಏನಾದರೂ ಬೇಕು ಎನಿಸಿದ್ದು ದೊರಕಿದಾಗ ಒಂದು ರೀತಿಯ ಸಂತೋಷವಾಗುತ್ತದೆ ಆದರೆ ನಮ್ಮ ಪಕ್ಕದವರಿಗೆ ಏನಾದರೂ ತೊಂದರೆಯಾದಾಗ ಅವರಿಗೆ ಆದಾಗ ತೊಂದರೆಯನ್ನು ನಾವು ಇನ್ನೊಬ್ಬರಿಗೆ ಹೇಳಲು ಉತ್ಸಾಹಿಗಳಾಗಿರುತ್ತೇವೆಯೋ, ನಿರುತ್ಸಹಿಗಳಾಗಿರುತ್ತೇವೆಯೋ, ಬಹುತೇಕರು ಇನ್ನೊಬ್ಬರಿಗೆ ಆದ ತೊಂದರೆಯನ್ನು ತುಂಬಾ ಉತ್ಸಾಹದಿಂದಲೇ ಎಲ್ಲರಿಗೂ ಹೇಳುತ್ತಾ ಬರುತ್ತಾರೆ ಅಂದರೆ ಅದರಲ್ಲಿ ವಿಚಿತ್ರ ರೀತಿಯ ಸುಖ ಸಂತೋಷದ ಅನುಭವವಾಗುತ್ತದೆ. ನಮ್ಮ ವ್ಯಕ್ತಿತ್ವ ಸರಿಯಾಗಿಲ್ಲದಿರುವುದನ್ನು ಈ ಪ್ರವೃತ್ತಿಯು ಸೂಚಿಸುತ್ತದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.