ಸಕಲೇಶಪುರ: ಬಾಲಕನ ಪುಂಡಾಟ ತಾಳಲಾರದೆ ಪೋಷಕರೇ ಆತನನ್ನು ಕಬ್ಬಿಣದ ಸರಪಳಿಯಿಂದ ಬಂಧಿಸಿ ಮನೆಯಲ್ಲಿ ಕೂಡಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಕ್ಯಾನಹಳ್ಳಿಯ ಕಾಫಿತೋಟ ದಲ್ಲಿ ಕಾರ್ಮಿಕರಾಗಿರುವ ಅಸ್ಸಾಂ ಮೂಲದ ಹಸೀನಾಬಾನು-ಅಮೀರ್ ಹುಸೇನ್ ದಂಪತಿಗೆ 7 ಮಕ್ಕಳಿದ್ದು, 6ನೇ ಮಗನಾದ ಉಬೇದುಲ್ಲಾ (11) ಅತ್ಯಂತ ತುಂಟನಾಗಿದ್ದ. ಪೋಷಕರು ಕೆಲಸಕ್ಕೆ ತೆರಳಿದ ಬಳಿಕ ಮನೆಬಿಟ್ಟು ಹೋಗುತ್ತಿದ್ದ ಈತನನ್ನು 2-3 ದಿನಗಳ ಕಾಲ ಹುಡುಕಿ ಕರೆತಂದಿದ್ದರು.
10 ದಿನಗಳಿಂದ ಈತನನ್ನು ಸರಪಳಿಯಿಂದ ಬಂಧಿಸಿದ್ದರು. ಬುಧವಾರ ಅದ್ಹೇಗೋ ಮನೆಯಿಂದ ಹೊರಬಂದ ಬಾಲಕ ಸರಪಳಿ ಸಹಿತ ಸಮೀಪದ ರಸ್ತೆಯಲ್ಲಿ ಕುಳಿತಿದ್ದ. ಇದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ತಿಳಿಸಿದ್ದರು. ಪೋಲಿಸರು ಆಗಮಿಸಿ ಬಾಲಕನನ್ನು ರಕ್ಷಿಸಿದ್ದು, ಆತನನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಮೈಸೂರಿನ ವಾಸನ್ ಐ ಕೇರ್ ನ 14ನೇ ವಾರ್ಷಿಕೋತ್ಸವದ ಆಚರಣೆ
"ವಾಲ್ಮೀಕಿ ಅಭಿವೃದ್ಧಿ ನಿಗಮ" ದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಖಂಡಿಸಿ ಬೃಹತ್ ಪ್ರತಿಭಟನೆ
ಮೈಸೂರಿನಲ್ಲಿ,"ದಿ ಜ್ಯುವೆಲರಿ ಶೋ" ಉದ್ಘಟಿಸಿದ ನಟಿ ಆರಾಧನ
ಮೈಸೂರಿನಲ್ಲಿ,"ದಿ ಜ್ಯುವೆಲರಿ ಶೋ" ಉದ್ಘಟಿಸಿದ ನಟಿ ಆರಾಧನ
ನಾಡಪ್ರಭು ಕೆಂಪೇಗೌಡ ಜಯಂತಿ, ಪ್ರಯುಕ್ತ 2000 ಹೋಳಿಗೆ ಹಂಚಿಕೆ !
FCI ಹುದ್ದೆಗೆ ಆನ್’ಲೈನ್’ನಲ್ಲಿ ಅರ್ಜಿ ಸಲ್ಲಿಸಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.