ಮನೆ ಅಪರಾಧ ಖರ್ಚಿಗೆ ಹಣ ಕೊಡಲಿಲ್ಲವೆಂದು ತಂದೆಯನ್ನೇ ಹತ್ಯೆ ಮಾಡಿದ ಮಗ

ಖರ್ಚಿಗೆ ಹಣ ಕೊಡಲಿಲ್ಲವೆಂದು ತಂದೆಯನ್ನೇ ಹತ್ಯೆ ಮಾಡಿದ ಮಗ

0

ಮಧ್ಯಪ್ರದೇಶ: ಖರ್ಚಿಗೆ ಹಣಕೊಡಲಿಲ್ಲವೆಂದು ಮಗನೊಬ್ಬ ತಂದೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ದೇಪಾಲ್​ ಪುರ ಪ್ರದೇಶದಲ್ಲಿ ನಡೆದಿದೆ.

Join Our Whatsapp Group

ಬಾಬು ಚೌಧರಿ(50)ಕೊಲೆಯಾದ ವ್ಯಕ್ತಿ.

ಸೋಹನ್​ ಮಾದಕ ವ್ಯಸನಿಯಾಗಿದ್ದ, ಜಮೀನಿನಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದ, ಜೂನ್ 15 ರಂದು ತಂದೆಯ ಬಳಿ 2 ಸಾವಿರ ರೂ ಕೇಳಿದ್ದ, ತಂದೆ ನಿರಾಕರಿಸಿದ್ದರು. ಕೋಪದಲ್ಲಿ ಅಲ್ಲೇ ಇದ್ದ ಕಲ್ಲಿನಿಂದ ತಂದೆಯನ್ನು ಜಜ್ಜಿ ಹತ್ಯೆ ಮಾಡಿದ್ದಾನೆ. ಆ ಪ್ರದೇಶದಲ್ಲಿ ಪತ್ತೆಯಾದ ಸಾಕ್ಷ್ಯಗಳನ್ನು ಪರಿಗಣಿಸಿ, ವ್ಯಕ್ತಿಯ ಮಗ ಸೋಹನ್ ​ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಅಕ್ರಮ ಗಣಿಗಾರಿಕೆ: ಸೈಲ್ ವಿರುದ್ಧ ಸಾಕ್ಷಿಗೆ ಸಹ ಆರೋಪಿ ಸಮ್ಮತಿ; ಸಿಬಿಐ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್
ಮುಂದಿನ ಲೇಖನಹುಲಿ ಅಭಯಾರಣ್ಯ ಬಾಕಿ ಹಣ ಬಿಡುಗಡೆಗೆ ಕೇಂದ್ರ ಅರಣ್ಯ ಸಚಿವರಿಗೆ ಈಶ್ವರ  ಬಿ ಖಂಡ್ರೆ ಮನವಿ