ಮನೆ ರಾಜ್ಯ ಭಕ್ತನಿಗೆ ಲಾಡು ಪ್ರಸಾದದೊಂದಿಗೆ 2.91 ಲಕ್ಷ ರೂ.ಹಣ ನೀಡಿದ ಮಹದೇಶ್ವರ ಬೆಟ್ಟದ ಸಿಬ್ಬಂದಿ

ಭಕ್ತನಿಗೆ ಲಾಡು ಪ್ರಸಾದದೊಂದಿಗೆ 2.91 ಲಕ್ಷ ರೂ.ಹಣ ನೀಡಿದ ಮಹದೇಶ್ವರ ಬೆಟ್ಟದ ಸಿಬ್ಬಂದಿ

0

ಚಾಮರಾಜನಗರ(Chamarajanagara):  ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಸಿಬ್ಬಂದಿ ಎಡವಟ್ಟಿನಿಂದಾಗಿ ಭಕ್ತನಿಗೆ ಲಾಡು ಪ್ರಸಾದದ ಜೊತೆಗೆ 2.91 ಲಕ್ಷ ಹಣವು ದೊರೆತಿದೆ.

ಭೀಮನ ಅಮಾವಾಸ್ಯೆಯ ದಿನವಾಗ ಗುರುವಾರ ಈ  ಘಟನೆ  ನಡೆದಿದ್ದು, ಮಹದೇಶ್ವರಬೆಟ್ಟದ ರಾಜಗೋಪುರ ಬಳಿ ವಿಶೇಷ ದರ್ಶನದ ₹500 ಟಿಕೆಟ್‌ ಕೌಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಭಕ್ತರಿಗೆ ವಿಶೇಷ ದರ ಟಿಕೆಟ್ ನೀಡಿ ಪ್ರಸಾದ ನೀಡಿದ್ದಾರೆ.

ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪವೇ ಹಣ ಇದ್ದ ಚೀಲ ಇದ್ದುದರಿಂದ ಹಣ ಸಹಿತ ಬ್ಯಾಗ್‌ ಅನ್ನು ಭಕ್ತರೊಬ್ಬರಿಗೆ ಸಿಬ್ಬಂದಿ ನೀಡಿದ್ದಾರೆ.

ಮಧ್ಯಾಹ್ನ ಹಣ ಕಾಣಿಸದೇ ಇದ್ದುದರಿಂದ ಗಾಬರಿಗೊಂಡು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಿಬ್ಬಂದಿ ವಿಷಯ ತಿಳಿಸಿದ್ದಾರೆ.  ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಭಕ್ತರೊಬ್ಬರು ಲಾಡು ಪ್ರಸಾದದ ಜೊತೆ ಹಣವಿದ್ದ ಚೀಲವನ್ನು ನೀಡಿರುವುದು ಬೆಳಕಿಗೆ ಬಂದಿದೆ.

ಕಣ್ತಪ್ಪಿನಿಂದ ಈ ಘಟನೆ ಜರುಗಿದೆ ಎಂದು ಹೇಳಲಾಗುತ್ತಿದ್ದು, ಭಕ್ತನ ಕೈ ಸೇರಿದ ಹಣವನ್ನು ಕೌಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದಲೇ ವಸೂಲು ಮಾಡಲು ತಾಕೀತು ಮಾಡಲಾಗಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.