ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವರ್ಗಾವಣೆ ಪರ್ವ ಜೋರಾಗಿದ್ದು, ರಾಜ್ಯದ 211 ಮಂದಿ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅದರಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಪಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಗಳ ಮಾಹಿತಿ ಇಲ್ಲಿದೆ.
ಪ್ರಸನ್ನ ಕುಮಾರ್ – ವಿವಿಪುರಂ ಸಂಚಾರ ಪೊಲೀಸ್ ಠಾಣೆಯಿಂದ ಸಿ.ಇ.ಎನ್ ಪೊಲೀಸ್ ಠಾಣೆಗೆ
ಮೊಹಮ್ಮದ್ ಇರ್ಷಾದ್ – ಸಿ.ಸಿ.ಆರ್.ಬಿ ಯಿಂದ ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಗೆ
ಚಿಕ್ಕಸ್ವಾಮಿ- ಬಿಳಿಕೆರೆ ಪೊಲೀಸ್ ಠಾಣೆಯಿಂದ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆ
ದೇವೆಂದ್ರ ಎಸ್.ಎಂ ಅವರನ್ನು ಹುಣಸೂರು ನಗರ ಪೊಲೀಸ್ ಠಾಣೆಗೆ
ಪ್ರಸಾದ್ ಕೆ.ಆರ್- ಹೆಬ್ಬಾಳ ಪೊಲೀಸ್ ಠಾಣೆಯಿಂದ ಲಷ್ಕರ್ ಪೊಲೀಸ್ ಠಾಣೆಗೆ
ಲವ ಎಂ.ಆರ್.- ಕೆ.ಆರ್.ನಗರ ಪೊಲೀಸ್ ಠಾಣೆಯಿಂದ ವಿ ವಿ ಪುರಂ ಸಂಚಾರ ಪೊಲೀಸ್ ಠಾಣೆಗೆ
ಕುಮಾರ್ – ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ
ಕಿರಣ್ ಕುಮಾರ್ ಸಿ- ಗುಂಡ್ಲುಪೇಟೆ ವೃತ್ತದಿಂದ ಮೈಸೂರಿನ ಪಿಟಿಎಸ್ ಗೆ
ಲೋಲಾಕ್ಷಿ ಟಿ.ಎಸ್.- ಬನ್ನೂರು ಪೊಲೀಸ್ ಠಾಣೆಯಿಂದ ಬಿಳಿಕೆರೆ ಪೊಲೀಸ್ ಠಾಣೆಗೆ
ನಾಗೇಗೌಡ ಎನ್.ಸಿ- ಸಿಟಿ ಎಸ್.ಬಿ ಯಿಂದ ಕೃಷ್ಣರಾಜ ಪೊಲೀಸ್ ಠಾಣೆಗೆ
ರೇಖಾ ಬಾಯು ಹೆಚ್ ಎಂ – ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಿಂದ ನರಸಿಂಹ ರಾಜ ಸಂಚಾರ ಪೊಲೀಸ್ ಠಾಣೆಗೆ
ಮೋಹಿತ್ ಸಹದೇವ್- ಲಕ್ಷ್ಮೀಪುರಂ ಪೊಲೀಸ್ ಠಾಣೆಯಿಂದ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.