ಮನೆ ರಾಜ್ಯ ಸೈಬರ್ ಅಪರಾಧದ  ಮಾಹಿತಿ ನೀಡಲು ವಸ್ತು ಪ್ರದರ್ಶನ ಆವರಣದಲ್ಲಿ ಮಳಿಗೆ ತೆರೆದ ರಾಜ್ಯ ಪೊಲೀಸ್ ಇಲಾಖೆ

ಸೈಬರ್ ಅಪರಾಧದ  ಮಾಹಿತಿ ನೀಡಲು ವಸ್ತು ಪ್ರದರ್ಶನ ಆವರಣದಲ್ಲಿ ಮಳಿಗೆ ತೆರೆದ ರಾಜ್ಯ ಪೊಲೀಸ್ ಇಲಾಖೆ

0

ಮೈಸೂರು(Mysuru): ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಸಿಐಡಿ ಸಹಯೋಗದೊಂದಿಗೆ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ  ಸೈಬರ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಮಳಿಗೆಯೊಂದನ್ನು ತೆರೆಯಲಾಗಿದೆ.

 ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮಳಿಗೆ ತೆರೆಯಲಾಗಿದ್ದು, ಅಲ್ಲಿ ಭೇಟಿ ನೀಡಿದರೆ ಸೈಬರ್ ಅಪರಾಧ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

ಸೈಬರ್ ಕ್ರೈಂ ಹೇಗೆ ನಡೆಯುತ್ತವೆ ಎಂಬ ಬಗ್ಗೆ ಜನರು ಯಾವ ರೀತಿ ಜಾಗೃತರಾಗಿರಬೇಕು ಎಂಬ ಬಗ್ಗೆ ವಿಡಿಯೋ ಮೂಲಕ ಜನ ಸಾಮಾನ್ಯರಿಗೆ ಮಾಹಿತಿ ನೀಡಲು ಜಾಗೃತಿ ವಿಡಿಯೋಗಳ ತುಣುಕನ್ನು ಇಡಲಾಗಿದ್ದು, ಆ ಮೂಲಕ ಸ್ಕ್ಯಾನ್ ಮಾಡಿ ಆ ವಿಡಿಯೋಗಳನ್ನು ನೋಡಬಹುದು.

ಇದರಲ್ಲಿ ಒಟಿಪಿ, ಉದ್ಯೋಗ, ಆನ್​​​ಲೈನ್​ ಜಾಹೀರಾತು ಇನ್ನಿತರ ವಿಚಾರದಲ್ಲಿ ಜನರು ಪ್ರತಿದಿನ ಮೋಸ ಹೋಗುತ್ತಿದ್ದಾರೆ. ಇದರ ಬಗ್ಗೆ ಮಾಹಿತಿ ತಿಳಿಸುವ ಉದ್ದೇಶದಿಂದ ಸೈಬರ್ ತಿಳಿವಳಿಕೆ ಮಳಿಗೆಯನ್ನು ತೆರೆಯಲಾಗಿದೆ. ಮತ್ತು ಈ ಮಳಿಗೆ ಪ್ರಾರಂಭದ ಉದ್ದೇಶ ಸೈಬರ್ ಕ್ರೈಂ ಬಗ್ಗೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಹಿಂದಿನ ಲೇಖನನಕ್ಕು ನಲಿಯಿರಿ
ಮುಂದಿನ ಲೇಖನಇತಿಹಾಸ ತಿರುಚಿದವರು ಸತ್ಯ ಹೇಳಲು ಸಾಧ್ಯವೇ?: ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು