ಸ್ಯಾಂಡಲ್ ವುಡ್ ನ ಫ್ರೆಶ್ ಜೋಡಿ ಪೃಥ್ವಿ ಅಂಬಾರ್ ಮತ್ತು ಖುಷಿ ರವಿ ನಟನೆಯ ಹೊಸ ಸಿನಿಮಾ ಸೆಟ್ಟೇರಿದ್ದು, ಇದನ್ನು ಮಂಗಳೂರಿನ ಅಶ್ವಿನ್ ಪದ್ಮರೂಪ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.
ನಿರ್ದೇಶಕರಾಗಿ ಇದು ಅವರಿಗೆ ಮೊದಲ ಸಿನಿಮಾವಾಗಿದ್ದು, ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಬಹುತೇಕ ಮಂಗಳೂರು ಮತ್ತು ಉಡುಪಿಯವರೇ ಹೆಚ್ಚಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕರಾಗಿ ನಟಿಸುತ್ತಿದ್ದು, ಖುಷಿ ರವಿ ನಾಯಕಿಯಾಗಿದ್ದಾರೆ. ಈ ಮೂಲಕ ಜನಪ್ರಿಯ ‘ದಿಯಾ’ ಸಿನಿಮಾ ಜೋಡಿಯನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡುವ ಅವಕಾಶ ಸಿನಿಪ್ರಿಯರಿಗೆ ಸಿಗಲಿದೆ.
ಮೊದಲ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ಪೃಥ್ವಿ ಅಂಬಾರ್
ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುವ ನಿರ್ದೇಶಕ ಅಶ್ವಿನ್ ಪದ್ಮರೂಪ್, ‘ಕಡಲ ತೀರದ ಪ್ರೇಮ ಕಥೆ ಹೊಂದಿರುವ ಈ ಸಿನಿಮಾವು ರೊಮ್ಯಾಂಟಿಕ್ ಕಾಮಿಡಿ ಜಾನರ್ನಲ್ಲಿ ಇರಲಿದೆ. ಈಗಾಗಲೇ ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣವು ಮುಕ್ತಾಯ ಆಗಿದೆ. ಮಂಗಳೂರು ಕೋಸ್ಟಲ್ನ ಚಿತ್ರಣವಿರುವ ಇದರಲ್ಲಿ ನಟ ಪೃಥ್ವಿ ಅಂಬಾರ್ ಅವರು ಇದೇ ಮೊದಲ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಪಾತ್ರಗಳಿರುವ ಈ ಸಿನಿಮಾದಲ್ಲಿ ರಾಹುಲ್ ಅಮೀನ್ ಮತ್ತು ಸಮತಾ ಅಮೀನ್ ಕೂಡ ನಟಿಸುತ್ತಿದ್ದು, ನಾಯಕಿ ಖುಷಿ ರವಿ ಅವರು ಇರುವ ದೃಶ್ಯಗಳ ಚಿತ್ರೀಕರಣ ಇನ್ನಷ್ಟೇ ನಡೆಯಬೇಕಿದೆ’ ಎಂದು ಹೇಳುತ್ತಾರೆ.
‘ದಕ್ಷಿಣ ಕನ್ನಡ ಕರಾವಳಿ ಭಾಗದ ಖ್ಯಾತ ನಿರ್ದೇಶಕ ರಾಹುಲ್ ಅಮೀನ್ ನಟಿಸುತ್ತಿರುವ ಈ ಸಿನಿಮಾದಲ್ಲಿ ನಾನು ಮೊದಲ ಬಾರಿಗೆ ಪೂರ್ಣ ನಿರ್ದೇಶಕನಾಗಿ ಗುರುತಿಸಿಕೊಳ್ಳುತ್ತಿದ್ದೇನೆ. ಬಹಳ ವರ್ಷಗಳಿಂದ ಸಿನಿಮಾ ಉದ್ಯಮದಲ್ಲಿ ಆ್ಯನಿಮೇಷನ್ ಮಾಡುತ್ತಿದ್ದ ನನಗೆ ನಿರ್ದೇಶಕನಾಗಿ ಈ ಸಿನಿಮಾ ಮೊದಲ ಪ್ರಯತ್ನ’ ಎಂದು ಅಶ್ವಿನ್ ಪದ್ಮರೂಪ್ ಹೇಳಿದ್ದಾರೆ.
ಈ ಸಿನಿಮಾದಲ್ಲಿ ಯೂನಿವರ್ಸಲ್ ಕಥೆ ಇದೆ
ಸೆಪ್ಟೆಂಬರ್ ನಲ್ಲಿಇದರ 2ನೇ ಶೆಡ್ಯೂಲ್ ಶುರು ಆಗಲಿದೆ ಎಂದಿರುವ ಅಶ್ವಿನ್ ಪದ್ಮರೂಪ್ ಅವರು, ‘ನಿರ್ದೇಶಕನಾಗಿ ನನಗೆ ಇದರ ಚಿತ್ರೀಕರಣ ಉತ್ತಮ ಅನುಭವ ನೀಡಿದೆ. ಪೃಥ್ವಿ ಅಂಬಾರ್ ಸೇರಿದಂತೆ ಇಡೀ ಚಿತ್ರತಂಡ ನನಗೆ ಉತ್ತಮ ಸಹಕಾರ ಕೊಟ್ಟಿದೆ. ಈ ಚಿತ್ರದ ಶೂಟಿಂಗ್ ಸಸಿಹಿತ್ಲು ಬೀಚ್ ಸೇರಿದಂತೆ ಮಂಗಳೂರಿನ ವಿವಿಧ ಕಡಲ ಕಿನಾರೆಗಳಲ್ಲಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಮಂಗಳೂರಿನಲ್ಲಿ ನಡೆಯುವ ಕಥೆ ಇದ್ದರೂ ಅದರಲ್ಲಿರುವ ವಿಷಯ ಯೂನಿವರ್ಸಲ್ ಆಗಿದೆ. ಆದ್ದರಿಂದ ಇದು ಎಲ್ಲಾಕಡೆಯ ಪ್ರೇಕ್ಷಕರಿಗೆ ರೀಚ್ ಆಗುತ್ತದೆ’ ಎನ್ನುತ್ತಾರೆ ಅಶ್ವಿನ್ ಪದ್ಮರೂಪ್.
ಪೃಥ್ವಿ ಅಂಬಾರ್ ಮುಂದಿನ ಸಿನಿಮಾಗಳು
‘ದಿಯಾ’ ಸಿನಿಮಾದಿಂದ ಫೇಮಸ್ ಆಗಿರುವ ಪೃಥ್ವಿ ಅಂಬಾರ್, ಆ ಚಿತ್ರದ ಹಿಂದಿ ಮತ್ತು ಮರಾಠಿ ರಿಮೇಕ್ನಲ್ಲೂ ನಟಿಸಿದ್ದಾರೆ. ಈ ವರ್ಷ ನಟಿಸಿದ್ದ ‘ಪೆಂಟಗನ್’, ‘ದೂರದರ್ಶನ’ ಸಿನಿಮಾಗಳು ಕೂಡ ತೆರೆಕಂಡಿವೆ. ಸದ್ಯ ಅವರ ‘ಭುವನಂ ಗಗನಂ’, ‘For Regn’, ‘ಲೈಫ್ ಈಸ್ ಬ್ಯೂಟಿಫುಲ್’, ‘ಹ್ಯಾಪಿಲಿ ಮ್ಯಾರೀಡ್ ‘ ಸಿನಿಮಾಗಳು ತೆರೆಗೆ ಬರಬೇಕಿದೆ. ತಮಿಳಿನಲ್ಲಿ ‘ಮಳೈ ಪುದಿಕಧ ಮನಿಧನ್’ ಸಿನಿಮಾದಲ್ಲೂ ಪೃಥ್ವಿ ನಟಿಸಿದ್ದಾರೆ.
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಕಾಂಗ್ರೆಸ್ ಯುವ ಮುಖಂಡರಾದ ರಮೇಶ್ ಗೌಡರವರ ಹುಟ್ಟುಹಬ್ಬವನ್ನು ಶಾಸಕರ ಕಚೇರಿಯಲ್ಲಿ, ಆಚರಿಸಿದರು….
ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ವಾರ್ತಾ ಇಲಾಖೆಯ ಆಯುಕ್ತರಾಗಿ ಹೇಮಂತ್ ನಿಂಬಾಳ್ಳರ್ ವರ್ಗಾವಣೆ
ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.