ಮನೆ ರಾಜ್ಯ ರಂಗಭೂಮಿ ನಿರ್ದೇಶಕ ಎಚ್.ವಿ.ವೆಂಕಟಸುಬ್ಬಯ್ಯ ನಿಧನ

ರಂಗಭೂಮಿ ನಿರ್ದೇಶಕ ಎಚ್.ವಿ.ವೆಂಕಟಸುಬ್ಬಯ್ಯ ನಿಧನ

0

ಬೆಂಗಳೂರು(Bengaluru): ಕನ್ನಡದ ರಂಗಭೂಮಿ ನಿರ್ದೇಶಕ ಹಾಗೂ ಶ್ರೀರಂಗರ ಒಡನಾಡಿ ಆಗಿದ್ದ ಎಚ್.ವಿ. ವೆಂಕಟಸುಬ್ಬಯ್ಯ (85) ಅವರು ಸೋಮವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಶೇಷಾದ್ರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರ್ ಆಗಿದ್ದ ವೆಂಕಟಸುಬ್ಬಯ್ಯ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.

ಇವರ ಸಾಧನೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿ ಹಾಗೂ ಬಿ.ವಿ. ಕಾರಂತ್ ಪ್ರಶಸ್ತಿಗಳು ಲಭಿಸಿದ್ದವು.

ಹಿಂದಿನ ಲೇಖನವಿಧಾನಸಭೆ: ರಾಣಿ ಎಲಿಜಬೆತ್, ಉಮೇಶ್ ಕತ್ತಿ ಸೇರಿದಂತೆ ನಿಧನರಾದ ಗಣ್ಯರಿಗೆ ಸಂತಾಪ
ಮುಂದಿನ ಲೇಖನಜ್ಞಾನವಾಪಿ ಮಸೀದಿ ಪ್ರಕರಣ: ಪೂಜೆ ಸಲ್ಲಿಕೆಗೆ ಕೋರಿರುವ ಮನವಿಯ ವಿಚಾರಣಾ ಅರ್ಹತೆ ಬಗ್ಗೆ ಇಂದು ತೀರ್ಪು