ಮನೆ ರಾಜಕೀಯ ಸುಮಲತಾ ಅಂಬರೀಶ್ ಜೊತೆ ಇರುವವರು ಭ್ರಷ್ಟಾತಿಭ್ರಷ್ಟರು: ರವೀಂದ್ರ ಶ್ರೀಕಂಠಯ್ಯ

ಸುಮಲತಾ ಅಂಬರೀಶ್ ಜೊತೆ ಇರುವವರು ಭ್ರಷ್ಟಾತಿಭ್ರಷ್ಟರು: ರವೀಂದ್ರ ಶ್ರೀಕಂಠಯ್ಯ

0

ಮೈಸೂರು(Mysuru): ಸಂಸದೆ ಸುಮಲತಾ ಜೊತೆಯಲ್ಲಿ ಇರುವವರು ಭ್ರಷ್ಟಾತಿ ಭ್ರಷ್ಟರು. ಮೈಸೂರು – ಬೆಂಗಳೂರು ಹೈ ವೇ ಕಾಮಗಾರಿಯಲ್ಲಿ ನೂರಾರು ಕೋಟಿ ರೂ. ಅಕ್ರಮ ನಡೆದಿದೆ. ಆ ಅಕ್ರಮಗಳಲ್ಲಿ ಸಂಸದೆ ಸುಮಲತಾ ಬೆಂಬಲಿಗರು ಭಾಗಿಯಾಗಿದ್ದಾರೆ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.

ಮಂಡ್ಯ  ಜೆಡಿಎಸ್  ಶಾಸಕರು ಆಣೆ – ಪ್ರಮಾಣಕ್ಕೆ ಬರಲು ಸಂಸದೆ ಸುಮಲತಾ ಆಹ್ವಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಂಸದೆ ಸುಮಲತಾ ಅಂಬರೀಶ್ ಕರೆದಾಕ್ಷಣ ಹೋಗಲಾಗುವುದಿಲ್ಲ. ಉತ್ತಮರು ಕರೆದ್ರೆ ಹೋಗಬಹುದು, ದೆವ್ವ ಕರೆದ್ರೆ ಹೋಗಲು ಆಗುತ್ತಾ? ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಸಂಸದೆ ಸುಮಲತಾ ಏಟ್ರಿಯಾ ಹೋಟೆಲ್’ಗೆ ಏಕೆ ಹೋಗಿದ್ದರು? ಹೋಟೆಲ್’ನಲ್ಲಿ ಕುಳಿತು ಏನು ಮಾಡಿದರು ಎಂಬುದಕ್ಕೆ ವಿಡಿಯೋ ದಾಖಲೆಗಳಿವೆ. ಸೂಕ್ತ ಸಂದರ್ಭ ಬಂದಾಗ ಆ ವಿಡಿಯೋ ಬಿಡುಗಡೆ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಈಗಾಗಲೇ ಸಂಸದೆ ಸುಮಲತಾ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಸಂಸದೆಯಾಗಿ ಸುಮಲತಾ ಅವರ ಸಾಧನೆ ಶೂನ್ಯ. ಜನರು ಇವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಮರುಕ ಪಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಹಿಂದಿನ ಲೇಖನಮಳವಳ್ಳಿ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ಮನೆಗೆ ಜಮೀರ್ ಭೇಟಿ- 5 ಲಕ್ಷ ಪರಿಹಾರ ವಿತರಣೆ
ಮುಂದಿನ ಲೇಖನಭಾರತ್ ಜೋಡೋ ಯಾತ್ರೆ ಕುರಿತು ಹೊರಬರಲಿದೆ ಪುಸ್ತಕ: ಎಚ್.ಎ.ವೆಂಕಟೇಶ್