ಮೈಸೂರು: ಮೈಸೂರು ತಾಲ್ಲೂಕು ಪಂಚಾಯತ್ ವತಿಯಿಂದ ಇಂದು ಚಾಮುಂಡಿಬೆಟ್ಟದಲ್ಲಿ “ಸಂವಿಧಾನ ಜಾಗೃತಿ ಜಾಥಾ”ವನ್ನು ನಡೆಸುವ ಮೂಲಕ ಸಂವಿಧಾನದ ಆಶಯ ಕುರಿತು ಪ್ರವಾಸಿಗರು ಹಾಗೂ ಭಕ್ತಾಧಿಗಳಿಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಗಿರಿಧರ್ ಅವರು, ಸಹಾಯಕ ನಿರ್ದೇಶಕರಾದ ಡಿ.ಸಿ.ಶಿವಣ್ಣ, ತಾಲ್ಲೂಕಿನ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್ಡಿಎಎ, ಡಿಇಒ ಹಾಗೂ ಬಿಲ್ ಕಲೆಕ್ಟರ್ಗಳವರು ಮತ್ತು ಶಾಲಾ ಮಕ್ಕಳೆಲ್ಲರೂ ಭಾಗವಹಿಸಿ, ಸಂವಿಧಾನ ಪ್ರಸ್ತಾವನೆಯನ್ನು ಓದುವ ಮೂಲಕ ಸಂವಿಧಾನದ ಆಶಯಕ್ಕೆ ಬದ್ಧರಾಗಿರುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸಿದರು.
Saval TV on YouTube