ಮೈಸೂರು: ‘ನಗರಾಡಳಿತ’ ವಿಷಯ ಕುರಿತು ನೆಲಮಂಗಲ ಮತ್ತು ಗದಗ ಬೆಟಗೇರಿ ನಗರಸಭೆ ಮತ್ತು ಪಿರಿಯಾಪಟ್ಟಣ, ಚಿಂಚಲಿ ಪುರಸಭೆಗೆ ಆಯ್ಕೆಗೊಂಡಿರುವ ಚುನಾಯಿತ ಪ್ರತಿನಿಧಿಗಳಿಗೆ “ರಾಜ್ಯ ನಗರಾಭಿವೃದ್ಧಿ ಸಂಸ್ಥೆ ಮೈಸೂರು” ವತಿಯಿಂದ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ತರಬೇತಿ ಕಾರ್ಯಗಾರವನ್ನು ಸಂಸ್ಥೆ ನಿರ್ದೇಶಕರಾದ ವೆಂಕಟೇಶ ಕಡಗದ ಕೈ ಉದ್ಘಾಟಿಸಿದರು.
ಈ ವೇಳೆ ನಿರ್ದೇಶಕರು ಮಾತನಾಡಿ, ಪ್ರತಿಯೊಬ್ಬ ಚುನಾಯಿತ ಜನಪ್ರತಿನಿಧಿಗಳಿಗೆ ಸರ್ಕಾರ ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ಮುಖಾಂತರ ಪುರಸಭೆ, ನಗರಸಭೆ, ಪಾಲಿಕೆಗಳ ಸದಸ್ಯರಿಗೆ ನಗರಾಡಳಿತ ಕುರಿತು ಮೂರು ದಿನಗಳ ಕಾಲ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿಯ ವೇಳೆಯಲ್ಲಿ ಆಡಳಿತ, ಕಾರ್ಯವೈಖರಿ, ಸರ್ಕಾರದ ಯೋಜನೆಗಳು, ವಾರ್ಡ್ ಗಳಲ್ಲಿ ಸದಸ್ಯರ ಜವಾಬ್ದಾರಿಗಳನ್ನು ಕುರಿತು ತರಬೇತಿ ನೀಡಲಾಗುತ್ತದೆ. ಆದ್ದರಿಂದ ಈ ಕಾರ್ಯಗಾರವನ್ನು ಸದುಪಯೋಗ ಪಡೆಸಿಕೊಳ್ಳಿ ಎಂದು ತಿಳಿಸಿದರು.
ಸಂಸ್ಥೆ ಉಪನಿರ್ದೇಶರಾದ ರಾಜು. ಸಿ ರವರು ಪ್ರೇರಣಾ ನುಡಿಯನ್ನಾಡಿದರೆ, ಬೋಧಕರಾದ ಯಾದವ್ ಕುಮಾರ್ ಪ್ರಾರ್ಥಿಸಿದರು. ತರಬೇತಿಯ ಸಂಯೋಜಕರು ಹಾಗೂ ಬೋಧಕರಾದ ಬಿ . ವಿ ವೆಂಕಟೇಶ್ ಮತ್ತು ಸುನೀತಾ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.