ರಾಮನಗರ: ರಾಮನಗರ ಪಟ್ಟಣದ ಐಜೂರು ಸರ್ಕಲ್ ನಲ್ಲಿಯೇ ಯುವಕರು ಮಾರಾಮಾರಿ ನಡೆಸಿದ್ದರು.
ಬೈಕಿನಲ್ಲಿದ್ದ ಇಬ್ಬರ ಮೇಲೆ ನಾಲ್ವರು ದಾಳಿ ನಡೆಸಿದ್ದಾರೆ. ಬೈಕಿನಿಂದ ಬಂದು ಮಾರಕಾಸ್ರ್ರದಿಂದ ಹಲ್ಲೆ ಮಾಡಲಾಗಿದೆ. ಅಪ್ರಾಪ್ತ ಬಾಲಕರೂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಯುವತಿಗೆ ಮೆಸೆಜ್ ಮಾಡಿದ್ದ ಹಿನ್ನೆಲೆಯಲ್ಲಿ ಜಗಳ ಶುರುವಾಗಿತ್ತು. ಒಬ್ಬ ಯುವತಿಯನ್ನು ಇಬ್ಬರು ಯುವಕರು ಪ್ರೀತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕಿರಿಕ್ ನಡೆದಿದೆ. ನನ್ನ ಹುಡುಗಿಗೆ ಹೇಗೆ ಮೆಸೇಜ್ ಮಾಡುತ್ತೀಯಾ ಎಂದು ಹಲ್ಲೆ ನಡೆಸಿದ್ದರು.
ಇದೇ ತಿಂಗಳ 18 ನೇ ತಾರೀಖು ಘಟನೆ ನಡೆದಿದೆ. ಯುವಕರ ಮಾರಾಮಾರಿ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.