ಮನೆ ಕಾನೂನು ಉಡುಪಿ: ನಕ್ಸಲ್ ಎನ್‌ ಕೌಂಟರ್ ನಡೆದ ಸ್ಥಳಕ್ಕೆ ಐಎಸ್‌ ಡಿ ಐಜಿಪಿ ಡಿ. ರೂಪಾ ಭೇಟಿ

ಉಡುಪಿ: ನಕ್ಸಲ್ ಎನ್‌ ಕೌಂಟರ್ ನಡೆದ ಸ್ಥಳಕ್ಕೆ ಐಎಸ್‌ ಡಿ ಐಜಿಪಿ ಡಿ. ರೂಪಾ ಭೇಟಿ

0

ಉಡುಪಿ: ಹೆಬ್ರಿ ತಾಲ್ಲೂಕಿನ ಪೀತ್‌ಬೈಲಿನಲ್ಲಿ ಎಎನ್‌ಎಫ್ ನವರು ನಡೆಸಿದ ಎನ್ ಕೌಂಟರ್ ನಲ್ಲಿ ಹತನಾದ ಹೆಬ್ರಿ ತಾಲ್ಲೂಕಿನ ಕೂಡ್ಲವಿನ ವಿಕ್ರಂ ಗೌಡನ ವಿರುದ್ಧ ಕೊಲೆ ಪ್ರಕರಣವೂ ಸೇರಿದಂತೆ 61 ಪ್ರಕರಣಗಳು ದಾಖಲಾಗಿದ್ದವು ಎಂದು ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಡಿ.ರೂಪ ತಿಳಿಸಿದರು.

Join Our Whatsapp Group

ಈತನ ವಿರುದ್ಧ ಕೇರಳದಲ್ಲೂ 19 ಪಕರಣಗಳು ದಾಖಲಾಗಿವೆ ಎಂದರು. 15 ದಿನಗಳಿಂದಲೂ ಶೋಧ ಕಾರ್ಯಾಚರಣೆ ನಡೆಯುತ್ತಿತ್ತು ಎಂದೂ ಹೇಳಿದರು.

ಮಾಧ್ಯಮದವರನ್ನು ಘಟನಾ ಸ್ಥಳದಿಂದ ಒಂದು ಕಿ.ಮೀ ದೂರದಲ್ಲೇ ಪೊಲೀಸರು ತಡೆದರು.

ಸೋಮವಾರ ರಾತ್ರಿ ನಡೆದ ಎನ್​ಕೌಂಟರ್​ನಲ್ಲಿ ನಕ್ಸಲ್ ನಾಯಕ‌ ವಿಕ್ರಮ್ ಗೌಡ ಹತನಾಗಿದ್ದಾನೆ.

ಸೋಮವಾರ ರಾತ್ರಿ ಐದು ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ಬಂದಿದ್ದ ವೇಳೆ ಎಎನ್ಎಫ್ ತಂಡ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ವಿಕ್ರಮ್ ಹತನಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.