ಮನೆ ರಾಜ್ಯ ವರುಣಾದಲ್ಲಿ ಸಿದ್ಧರಾಮಯ್ಯ ಓಟಕ್ಕೆ ಬ್ರೇಕ್ ಹಾಕಲು ವಿ.ಸೋಮಣ್ಣ ಸ್ಪರ್ಧೆ: ಪ್ರತಾಪ್ ಸಿಂಹ

ವರುಣಾದಲ್ಲಿ ಸಿದ್ಧರಾಮಯ್ಯ ಓಟಕ್ಕೆ ಬ್ರೇಕ್ ಹಾಕಲು ವಿ.ಸೋಮಣ್ಣ ಸ್ಪರ್ಧೆ: ಪ್ರತಾಪ್ ಸಿಂಹ

0

ಮೈಸೂರು:  ಸಿದ್ಧರಾಮಯ್ಯ ಓಟಕ್ಕೆ ಬ್ರೇಕ್ ಹಾಕಲು ಸೋಮಣ್ಣರನ್ನ  ಸ್ಪರ್ಧೆಗಿಳಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Join Our Whatsapp Group

ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ವಿ. ಸೋಮಣ್ಣ ಸ್ಪರ್ಧೆಯಿಂದಾಗಿ  ಸೋಲಿನ ಭಯ ಶುರುವಾಗಿದೆ. ಹೀಗಾಗಿ ಸಿದ್ಧರಾಮಯ್ಯ ತಮ್ಮ ಮೊಮ್ಮಗನನ್ನ ಕರೆ ತಂದಿದ್ದಾರೆ.  ಜಾತಿವಾದಿ ಕಾಂಗ್ರೆಸ್, ಜೆಡಿಎಸ್ ಮಟ್ಟಹಾಕಬೇಕು  ಎಂದು ಕಿಡಿ ಕಾರಿದರು.

ವರುಣಾಗೆ ವಿ.ಸೋಮಣ್ಣ ಬರಲು ಅವರು ಯಾರು ಎಂದು ಪ್ರಶ್ನಿಸಿದ್ದ ಸಿದ್ಧರಾಮಯ್ಯಗೆ ಟಾಂಗ್ ನೀಡಿದ ಸಂಸದ ಪ್ರತಾಪ್ ಸಿಂಹ, ಸಿದ್ಧರಾಮಯ್ಯಗೂ ಬಾದಾಮಿಗೂ ಏನು ಸಂಬಂಧ..?  ಸೋನಿಯಾ ಗಾಂಧಿಗೂ ಬಳ್ಳಾರಿಗೂ ಏನು ಸಂಬಂಧ..?  ಮಾತೆತ್ತಿದ್ದರೆ 10 ಕೆಜಿ  ಅಕ್ಕಿ ಕೊಡ್ತೇನೆ ಅಂತಾರೆ. ಸಿದ್ಧರಾಮನಹುಂಡಿ ಗದ್ದೆಯಿಂದ ತಂದು ಕೊಡ್ತಾರಾ…? ಎಂದು ವಾಗ್ದಾಳಿ ನಡೆಸಿದರು.

ಹಿಂದಿನ ಲೇಖನಬಸವನಗುಡಿಯ ವಿಶೇಷ ನವಗ್ರಹ ದೇವಾಲಯ
ಮುಂದಿನ ಲೇಖನನೈತಿಕವಾಗಿ ಹೆಚ್ಚು ಮತದಾನ ಮಾಡಿಸಲು ಕ್ರಮವಹಿಸಿ: ಡಾ. ಕೆ.ವಿ ರಾಜೇಂದ್ರ