ಮನೆ ಸುದ್ದಿ ಜಾಲ ಮೈಸೂರಿಗೆ ಆಗಮಿಸಿದ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು

ಮೈಸೂರಿಗೆ ಆಗಮಿಸಿದ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು

0

ಮೈಸೂರು(Mysuru): ಚೆನ್ನೈ- ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೋಮವಾರ ಮಧ್ಯಾಹ್ನ 12.13ಕ್ಕೆ ಮೈಸೂರಿಗೆ ಆಗಮಿಸಿದೆ.

ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನ.11ರ ಶುಕ್ರವಾರ ಚಾಲನೆ ನೀಡಲಿರುವ  ಹಿನ್ನೆಲೆಯಲ್ಲಿ ರೈಲಿನ ಪ್ರಾಯೋಗಿಕ ಸಂಚಾರವು ಸೋಮವಾರ ನಡೆಯಿತು.

ರೈಲನ್ನು ಮೊದಲ ಬಾರಿ ನೋಡುವ ಕಾತರದಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್’ನಲ್ಲಿ ಜಮಾಯಿಸಿದ್ದರು.

ನೀಲಿ- ಶ್ವೇತ ಬಣ್ಣದ ರೈಲಿನ ಎಂಜಿನ್ ಕಾಣುತ್ತಿದ್ದಂತೆ ಹರ್ಷೋದ್ಗಾರ ಮುಗಿಲು ಮುಟ್ಟಿತು. ಶಿಳ್ಳೆ- ಚಪ್ಪಾಳೆಯ ಮೂಲಕ ಸ್ವಾಗತಿಸಿದರು.

ವಂದೇ ಭಾರತ್ ರೈಲನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಚೆನ್ನೈ- ಮೈಸೂರು ಮಾರ್ಗದಲ್ಲಿ ಓಡುವ ಐದನೇ ವಂದೇ ಭಾರತ್ ರೈಲು ಇದಾಗಿದೆ.

ದೇಶದ ಅತ್ಯಾಧುನಿಕ ರೈಲು ಇದಾಗಿದೆ. ವೇಗ ಹಾಗೂ ಸಾಮರ್ಥ್ಯಕ್ಕೆ ಹೆಸರಾಗಿರುವ ವಂದೇ ಭಾರತ್ ಕಡಿಮೆ ಅವಧಿಯಲ್ಲಿ ದೂರ ಪ್ರಯಾಣ ಕ್ರಮಿಸುವುದು ಇದರ ವಿಶೇಷ!

100 ಕಿ.ಮೀ ವೇಗವನ್ನು ತಲುಪಲು ತೆಗೆದುಕೊಳ್ಳುವ ಸಮಯ ಕೇವಲ 52 ಸೆಕೆಂಡ್ ಆಗಿವೆ. ಐಶಾರಾಮಿ ಆಸನ, ಸ್ವಯಂಚಾಲಿತ ಅಗ್ನಿ ಸೆನ್ಸಾರ್ ಗಳು, ಸಿಸಿಟಿವಿ ಕ್ಯಾಮೆರಾ, ವೈಫೈ, ಜಿಪಿಎಸ್ ವ್ಯವಸ್ಥೆ ರೈಲಿನಲ್ಲಿದೆ.

ಹಿಂದಿನ ಲೇಖನಮೈಸೂರು: ವಿದ್ಯುತ್ ಶಾಕ್ ತಗುಲಿ ವಿದ್ಯಾರ್ಥಿ ಸಾವು
ಮುಂದಿನ ಲೇಖನಎಂ.ಆರ್. ಚಂದ್ರಶೇಖರ್ ಸಾವು: ಡಯಾಟಮ್ ಟೆಸ್ಟ್‌ನ ಮೊರೆ ಹೋದ ಪೊಲೀಸರು