ಬೆಂಗಳೂರು : ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಎಂ.ಡಿ ಸಮೀರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ ಹಲವು ವಿಚಾರಗಳು ತನಿಖೆಯಿಂದ ಬಯಲಾಗಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಯೂಟ್ಯೂಬರ್ ಎಂ.ಡಿ ಸಮೀರ್ ಮುಂದಿನ ಒಂದು ವಾರದ ಒಳಗಾಗಿ ವಾಸವಿರುವ ಮನೆ ಖಾಲಿ ಮಾಡಲು ಮಾಲೀಕರ ಅನುಮತಿ ಅನ್ನೋದು ಕಂಡುಬಂದಿದೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪದಲ್ಲಿ ಮೊದಲು ವಾಸವಿದ್ದ ಆರೋಪಿ ಸಮೀರ್ 4 ವರ್ಷದಿಂದ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಮನೆಯಲ್ಲಿ ವಾಸವಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ಸಮೀರ್ ಆರಂಭದಲ್ಲಿ ತಾನು ಬಳಸುತ್ತಿದ್ದ ಫೋನ್ ನಂಬರ್ ಸಿಮ್ ಕಾರ್ಡನ್ನ ಅವರ ಕಸಿನ್ ಸಿಸ್ಟರ್ಗೆ ಕೊಟ್ಡಿದ್ದಾನೆ. ಧರ್ಮಸ್ಥಳ ಪೊಲೀಸರು ಬೆನ್ನು ಬಿದ್ದಿದ್ದಾರೆಂಬ ವಿಚಾರ ತಿಳಿದ ಆರೋಪಿ ಸಮೀರ್ ತಾನು ಬಳಸುತ್ತಿದ್ದ, ನಂಬರ್ ಕಸಿನ್ ಸಿಸ್ಟರ್ಗೆ ಕೊಟ್ಟು ತಲೆಮರಿಸಿಕೊಂಡು ಧರ್ಮಸ್ಥಳ ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದ ಎನ್ನೋದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.














