ಟೋಕಿಯೊ (Tokyo): ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 21–19, 21–9 ರಲ್ಲಿ ಹಾಂಗ್ಕಾಂಗ್ನ ಚುಂಗ್ ಎಂಗನ್ ಯಿ ಅವರನ್ನು ಪರಾಭವಗೊಳಿಸಿದರು. ಸೈನಾ ಅವರು ಎರಡನೇ ಸುತ್ತಿನಲ್ಲಿ ಜಪಾನ್ನ ನೊಜೊಮಿ ಒಕುಹರ ಅವರನ್ನು ಎದುರಿಸಬೇಕಿತ್ತು. ಆದರೆ ಗಾಯದ ಕಾರಣ ನೊಜೊಮಿ ಹಿಂದೆ ಸರಿದರು. ‘ಬೈ’ ಪಡೆದ ಸೈನಾ ಪ್ರೀಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು.
ಚುಂಗ್ ವಿರುದ್ಧದ ಪಂದ್ಯದ ಮೊದಲ ಗೇಮ್ನಲ್ಲಿ 4–7 ರಲ್ಲಿ ಹಿನ್ನಡೆಯಲ್ಲಿದ್ದ ಸೈನಾ, ಮರುಹೋರಾಟ ನಡೆಸಿ 12–11 ರಲ್ಲಿ ಮುನ್ನಡೆ ಪಡೆದರು. ಆ ಬಳಿಕ ಇಬ್ಬರ ನಡುವೆ ತುರುಸಿನ ಪೈಪೋಟಿ ನಡೆಯಿತು. 19–19 ರಲ್ಲಿ ಸಮಬಲ ಕಂಡುಬಂತು. ಈ ವೇಳೆ ಶಿಸ್ತಿನ ಆಟವಾಡಿದ ಸೈನಾ ಎರಡು ಪಾಯಿಂಟ್ಸ್ ಕಲೆಹಾಕಿ ಗೇಮ್ ಗೆದ್ದುಕೊಂಡರು.
ಎರಡನೇ ಗೇಮ್ನಲ್ಲಿ ಉತ್ತಮ ಆಟವಾಡಿದರು. ಆರಂಭದಲ್ಲೇ 11–6 ರಲ್ಲಿ ಮುನ್ನಡೆ ಪಡೆದು ಎದುರಾಳಿಯ ಮೇಲೆ ಒತ್ತಡ ಹೇರಿದರು. ಅದೇ ಮೇಲುಗೈಯನ್ನು ಕಾಪಾಡಿಕೊಂಡು ಪಂದ್ಯ ಜಯಿಸಿದರು.
ತ್ರಿಶಾ– ಗಾಯತ್ರಿ ಶುಭಾರಂಭ
ಭಾರತದ ತ್ರಿಶಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದರು. ಮೊದಲ ಸುತ್ತಿನಲ್ಲಿ ಅವರು 21–11, 21–13 ರಲ್ಲಿ ಮಲೇಷ್ಯಾದ ಯೀನ್ ಯುವಾನ್ ಲೊ ಮತ್ತು ವಲೇರಿ ಸಿಯೊ ಅವರನ್ನು ಮಣಿಸಿದರು.
ಕೆ.ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್ ಅವರೂ ಎರಡನೇ ಸುತ್ತಿಗೆ ಮುನ್ನಡೆದರು. ಮಂಗಳವಾರ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ಭಾರತದ ಜೋಡಿ 21–8, 21–14 ರಲ್ಲಿ ಇಟಲಿಯ ಮಾರ್ಟಿನಾ ಕೊರ್ಸಿನಿ– ಜುಡಿತ್ ಮಯೆರ್ ಎದುರು ಜಯಿಸಿತು.
ಮಿಶ್ರ ಡಬಲ್ಸ್ನಲ್ಲಿ ವೆಂಕಟ್ ಗೌರವ್ ಪ್ರಸಾದ್– ಜೂಹಿ ದೇವಾಂಗನ್ ಜೋಡಿ 10–21, 21–23 ರಲ್ಲಿ ಇಂಗ್ಲೆಂಡ್ನ ಗ್ರೆಗೊರಿ ಮಯರ್ಸ್– ಜೆನ್ನಿ ಮೂರ್ ಎದುರು ಪರಾಭವಗೊಂಡಿತು.
ತನಿಷಾ ಕ್ರಾಸ್ಟೊ ಮತ್ತು ಇಶಾನ್ ಭಟ್ನಾಗರ್ ಅವರೂ ನಿರಾಸೆ ಅನುಭವಿಸಿದರು. ಥಾಯ್ಲೆಂಡ್ನ ಸುಪಕ್ ಜೊಮ್ಕೊ– ಸುಪಿಸರ ಪೆವ್ಸಂಪ್ರನ್ ಅವರು 21–14, 21–17 ರಲ್ಲಿ ಭಾರತದ ಜೋಡಿಯನ್ನು ಮಣಿಸಿತು.
ಪುರುಷರ ಡಬಲ್ಸ್ನಲ್ಲಿ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಪಂಜಲ ಅವರ ಸವಾಲಿಗೆ ತೆರೆಬಿತ್ತು. ಅವರು 14–21, 18–21 ರಲ್ಲಿ ಫ್ರಾನ್ಸ್ನ ಫ್ಯಾಬಿಯೆನ್ ಡೆಲ್ರು– ವಿಲಿಯಮ್ ವಿಲೆಜರ್ ಎದುರು ಸೋತರು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.