ಮನೆ ಅಪರಾಧ ಮದುವೆಯಾಗಲು ಅಪ್ರಾಪ್ತ ಬಾಲಕಿ ಕರೆದೊಯ್ದಿದ್ದ ಯುವಕನ ಬಂಧನ

ಮದುವೆಯಾಗಲು ಅಪ್ರಾಪ್ತ ಬಾಲಕಿ ಕರೆದೊಯ್ದಿದ್ದ ಯುವಕನ ಬಂಧನ

0

ಚಾಮರಾಜನಗರ(Chamarajangar): ಪ್ರೀತಿಯ ಹೆಸರನಲ್ಲಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ, ವಿವಾಹವಾಗಲು ಕರೆದೊಯ್ದಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಅರಳೀಪುರ ಗ್ರಾಮದ ಪ್ರಕಾಶ್(31) ಬಂಧಿತ ಆರೋಪಿಯಾಗಿದ್ದಾನೆ. ಜಿಲ್ಲೆಯ ಗ್ರಾಮವೊಂದರ ಪ್ರೌಢಶಾಲೆ ವಿದ್ಯಾರ್ಥಿನಿಯನ್ನು ಪ್ರೀತಿ – ಪ್ರೇಮ ಎಂದು ಪುಸಲಾಯಿಸಿ, ಮದುವೆಯಾಗಲು ಮೂರು ದಿನಗಳ ಹಿಂದೆ ಪ್ರಕಾಶ್ ಕರೆದೊಯ್ದಿದ್ದ ಎಂದು ತಿಳಿದು ಬಂದಿದೆ.

ಡೇರಿಗೆ ಹಾಲು ಹಾಕಲು ತೆರಳಿದ್ದ ವೇಳೆ ಮೊಮ್ಮಗಳು ಕಾಣೆಯಾಗಿದ್ದು, ಯಾರೋ ಅಪಹರಿಸಿರಬಹುದು ಎಂದು ಬಾಲಕಿಯ ಅಜ್ಜಿ ದೂರು ಕೊಟ್ಟಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸ್ ಇನ್ಸ್​ಪೆಕ್ಟರ್ ಬಿ.ಪುಟ್ಟಸ್ವಾಮಿ ತಮಿಳುನಾಡಿಗೆ ಕರೆದೊಯ್ದಿದ್ದ ಯುವಕನನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ಬಿಡಲಾಗಿದೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಕೇವಲ ಜಾತಿ ಹೆಸರಿಸಿದರೆ ಎಸ್‌ಸಿ, ಎಸ್‌ಟಿ ಕಾಯಿದೆಯಡಿ ಅಪರಾಧವಾಗದು ಎಂಬುದು ಅಪಾಯಕಾರಿಯಾಗುತ್ತದೆ: ಬಾಂಬೆ ಹೈಕೋರ್ಟ್
ಮುಂದಿನ ಲೇಖನಟೀಕೆಗಳನ್ನು ಸಹಿಸುವಷ್ಟು ಶಕ್ತಿ ನ್ಯಾಯಾಲಯಗಳಿಗಿದೆ: ಬಾಂಬೆ ಹೈಕೋರ್ಟ್